i
ತಿಪ್ಪಾರೆಡ್ಡಿ ವಿರುದ್ದ ಮುನಿಸಿಕೊಂಡಿದ್ದವರು ಬಿಜೆಪಿ ಕಚೇರಿಯಲ್ಲಿ ಪ್ರತ್ಯಕ್ಷ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ವಿರುದ್ದ ಮುನಿಸಿಕೊಂಡು ಕಾಂಗ್ರೆಸ್ನ ಕೆ.ಸಿ.ವೀರೇಂದ್ರಪಪ್ಪಿ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದ ಕೆಲವು ನಗರಸಭೆ ಸದಸ್ಯರುಗಳು ಗುರುವಾರ ಬಿಜೆಪಿ ಕಚೇರಿಯಲ್ಲಿ ದಿಢೀರ್ ಪ್ರತ್ಯಕ್ಷವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರಿಗೆ ಬೆಂಬಲ ಸೂಚಿಸಿದರು.ವಿಧಾನಸಭಾ ಚುನಾವಣೆಯಲ್ಲಿ ಜಿ.ಹೆಚ್.ತಿಪ್ಪಾರೆಡ್ಡಿರವರನ್ನು ಶತಗತಾಯ ಸೋಲಿಸಬೇಕೆಂಬ ಹಠತೊಟ್ಟು ಕಾಂಗ್ರೆಸ್ನ ವೀರೇಂದ್ರಪಪ್ಪಿ ಕಡೆ ಹಾರಿದ್ದ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಪತಿ ಸದಸ್ಯ ವೆಂಕಟೇಶ್, ಶಶಿಧರ್, ಭಾಸ್ಕರ್, ಮಂಜುಳ, ತಾರಕೇಶ್ವರಿ, ಮಾಜಿ ಸದಸ್ಯ ಮಹೇಶ್ ಇವರುಗಳು ಬಿಜೆಪಿ ಕಚೇರಿಗೆ ಆಗಮಿಸಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಗೋವಿಂದ ಕಾರಜೋಳರವರ ಪರ ನಿಲ್ಲುವುದಾಗಿ ಸಮ್ಮತಿಸಿದರು.