i
ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬುತ್ತದೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ಫೂರ್ತಿ ಹೆಸರಿನಲ್ಲಿ ಆಚರಿಸಲಾಗುತ್ತಿರುವ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬುತ್ತದೆ ಎಂದು ಪ್ರಾಂಶುಪಾಲ ಡಾ.ಪಿ.ಬಿ.ಭರತ್ ತಿಳಿಸಿದರು.
ನಗರದ ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ 2024ರ ಮೇ-7 ರಿಂದ 09ರವರೆಗೆ ನಡೆಯುವ ಸ್ಫೂರ್ತಿ-೨೦೨೪ ರ ಸಾಂಸ್ಕೃತಿಕ ಸ್ಫರ್ಧೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ನಾಲ್ಕು ದಶಕಗಳಿಂದ ನಡೆದುಕೊಂಡು ಬಂದಿರುವ ಸ್ಫೂರ್ತಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹವನ್ನು ತುಂಬುತ್ತದೆ. ಕೇವಲ ಪಠ್ಯ,ಪರೀಕ್ಷೆಗಳಿಗೆ ಸೀಮಿತವಾದ ವಿದ್ಯಾರ್ಥಿಗಳ ಜೀವನಕ್ಕೊಂದು ನವ ಚೇತನ ತರುತ್ತದೆ. ವರ್ಷಕ್ಕೊಮ್ಮೆ ಬರುವ ಈ ಉತ್ಸವದಲ್ಲಿ ವಿದ್ಯಾರ್ಥಿಗಳು ಎಲ್ಲಾ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ ಈ ಉತ್ಸವದ ಮೆರಗು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ, ಕೌಶಲ್ಯಗಳನ್ನು ಪ್ರದರ್ಶಿಸಲು ಸ್ಫೂರ್ತಿ ಒಂದು ಉತ್ತಮ ವೇದಿಕೆಯಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಆಸಕ್ತಿಯಿದ್ದರು, ಸಮಯದ ಅಭಾವ, ಪಠ್ಯಕ್ರಮ, ಪರೀಕ್ಷೆ, ಕ್ಯಾಂಪಸ್ ಇಂರ್ಟವ್ಯೂಗಳಂತಹ ಪ್ರಕ್ರಿಯೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡು ಒತ್ತಡಕ್ಕೆ ಒಳಗಾಗಿದ್ದು, ವಿದ್ಯಾರ್ಥಿಗಳಿಗೆ ಮನೋರಂಜನೆ ಇಲ್ಲದಂತಾಗಿದೆ. ವಿದ್ಯಾಬ್ಯಾಸ ಹಾಗೂ ಉದ್ಯೋಗಗಳಿಗೆ ಕೊಡುವಷ್ಟು ಆಸಕ್ತಿಯನ್ನು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ನೀಡದೇ ಇದ್ದಿದ್ದರೆ ಇಂದೂ ನಾವು ಪ್ರಖ್ಯಾತ ನಾಮರಾದಂತಹ ಹಲವು ಕ್ರಿಕೆಟಿಗರು, ಹಾಡುಗಾರರು,ನಟನಟಿಯರು,ಸಂಗೀತ ಸಂಯೋಜಕರು,ನೃತ್ಯಗಾರರನ್ನು ಕಾಣಲು ಸಾಧ್ಯವೇ ಇರಲಿಲ್ಲ. ವಿದ್ಯಾರ್ಥಿಗಳು ಓದಿನ ಜೊತೆಜೊತೆಗೆ ತಮ್ಮ ಇಚ್ಛೆಯ ಕ್ಷೇತ್ರಗಳಲ್ಲಿ ಆಸಕ್ತಿ ತೋರಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುತ್ತಾ ಹೋದಲ್ಲಿ ಒಬ್ಬ ವಿದ್ಯಾರ್ಥಿ ಅಸಾಮಾನ್ಯ ಕ್ರೀಡಾಕಾರನಾಗಿಯೋ, ನಟನಟಿಯಾರಾಗಿಯೋ, ಸಂಗೀತಗಾರರಾಗಿಯೋ, ನೃತ್ಯಗಾರರಾಗಿ ಹೊರಹೊಮ್ಮವಲ್ಲಿ ಯಾವ ಸಂದೇಹವೇ ಇಲ್ಲ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಕ್ರೀಡಾ ಮನೋಭಾವವನ್ನು ಹೊಂದಿ, ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕು ಹಾಗೂ ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಪೂರ್ತಿ ೨೦೨೪ ರ ಮುಖ್ಯ ಸಂಚಾಲರಕ ಡಾ.ಬಿ.ಜಿ.ಕುಮಾರಸ್ವಾಮಿ, ಕ್ರೀಡಾ ಸಂಚಾಲಕರಾದ ಡಾ.ಕೆ.ಕುಮಾರಸ್ವಾಮಿ, ಡಾ.ಸತೀಶ್.ಜೆ, ಪ್ರೊ.ಡಿ.ವಿಶ್ವನಾಥ್, ಪ್ರೊ.ಸುಶ್ಮಿತಾದೇಬ್, ಪ್ರೊ.ಎಂ.ಕೆ.ಶೃತಿ, ಪ್ರೊ.ಸುಧಾ ಟಿ, ಪ್ರೊ. ಪೂಜಾ ಕೆ ಎನ್ , ಪ್ರೊ. ಪುಷ್ಪಲತಾ ಹಾಗೂ ಬಿ.ಎಂ.ಸಿ.ಎಚ್ನ ಅಮೃತಾ ಉಪಸ್ಥಿತರಿದ್ದರು. ಕುಮಾರಿ ಭೂಮಿಕಾ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.