i
ಕಾಂತರಾಜ ಆಯೋಗದ ವರದಿ ಸಾರ್ವಜನಿಕ ಚರ್ಚೆಗೆ ಬರಲಿ : ಪ್ರೊ.ರವಿವರ್ಮಕುಮಾರ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಯನ್ನು ಆದಷ್ಟು ಶೀಘ್ರವೆ ಸಂಪುಟ ಸಭೆಯ ಮುಂದೆ ತಂದು ಸಾವ೯ಜನಿಕವಾಗಿ ಬಿಡುಗಡೆಗೊಳಿಸಿ ಮುಕ್ತ ಚಚೆ೯ಗೆ ಅವಕಾಶ ಮಾಡಿಕೊಡಬೇಕಾಗಿದೆ ಎಂದು ಮಾಜಿ ಅಡ್ವೊಕೇಟ್ ಜನರಲ್ ಹಾಗು ಹೈಕೋರ್ಟ್ ನ್ಯಾಯವಾದಿ ಪ್ರೊ. ರವಿವರ್ಮಕುಮಾರ್ ಅಭಿಪ್ರಾಯಪಟ್ಟರು.
ಹಿಂದುಳಿದ ಜನ ಜಾಗೃತಿ ವೇದಿಕೆ ನಿನ್ನೆ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಏಪ೯ಡಿಸಿದ್ದ “ಕಾಂತರಾಜ ಆಯೋಗದ ವರದಿ” ಜಾರಿ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂತರಾಜ ಅವರ ನೇತೃತ್ವದ ಸಮಿತಿ ವರದಿ ಸಿದ್ಧಪಡಿಸುವ ಹಂತದಲ್ಲಿ ಎಲ್ಲ ಮಾನದಂಡಗಳನ್ನು ಅಳವಡಿಸಿಕೊಂಡು ನಿಯಮಾನುಸಾರ ಕಾರ್ಯನಿರ್ವಹಿಸಿರುವುದನ್ನು ತಾವು ಗಮನಿಸಿರುವುದಾಗಿ ಹೇಳಿದರು.
ಪ್ರಸ್ತುತ ಸಕಾ೯ರಕ್ಕೆ ಸಲ್ಲಿಸಲ್ಪಟ್ಟಿರುವ ವರದಿ ಆಡಳಿತಾತ್ಮಕವಾಗಿ ಕಾಂತರಾಜ ಆಯೋಗದ ವರದಿಯೊ ಅಥವ ಜಯಪ್ರಕಾಶ್ ಹೆಗ್ಡೆ ಆಯೋಗದ ವರದಿಯೊ ಎಂಬ ಗೊಂದಲವಿದೆಯಾದರೂ ಈ ಬಗ್ಗೆ ಸಂಘಟನೆಗಳು ಮತ್ತು ಮುಖಂಡರುಗಳು ಧೃತಿಗೆಡದೆ ಅಂತಿಮವಾಗಿ ಸಕಾ೯ರದ ಕೈ ಸೇರಿರುವ “ಹಿಂದುಳಿದ ವಗ೯ಗಳ ಆಯೋಗದ ವರದಿ” ಅನುಷ್ಠಾನದತ್ತ ಗಮನ ನೀಡಬೇಕೆಂದು ಅವರು ಸಲಹೆ ನೀಡಿದರು.
ಸಂವಾದದಲ್ಲಿ ಕಾಂತರಾಜ ಆಯೋಗದ ಸಮಿತಿ ಸದಸ್ಯರಾಗಿದ್ದ ನ್ಯಾಯವಾದಿ ಎನ್.ಪಿ.ಧಮ೯ರಾಜ್ ವರದಿ ಸಿದ್ಧಪಡಿಸಲು ಕೈಗೊಂಡ ಮಾನದಂಡಗಳ ಕುರಿತು ವಿವರಣೆ ನೀಡಿದರು, ಹಿಂದುಳಿದ ಜನಜಾಗೃತಿ ವೇದಿಕೆ ಗೌರವ ಅಧ್ಯಕ್ಷ ಪ್ರೊ. ಹೆಚ್. ರಾಚಪ್ಪ ಅಧ್ಯಕ್ಷ ತೀ.ನ. ಶ್ರೀನಿವಾಸ್ ಬಿ. ಜನಮೇಜಿರಾವ್, ಚನ್ನವೀರಪ್ಪ ಗಾಮನಗಟ್ಟಿ, ಪ್ರೊ. ಕಲ್ಲನ ರೈತ ಸಂಘದ ಕುಗ್ವೆ ಶಿವಾನಂದ ಎನ್.ಡಿ. ವಸಂತಕುಮಾರ್ ಇತರರು ಉಪಸ್ಥಿತರಿದ್ದರು ಆರಂಭದಲ್ಲಿ ಸಂಚಾಲಕ ಆರ್.ಟಿ. ನಟರಾಜ್ ಸವ೯ರನ್ನೂ ಸ್ವಾಗತಿಸಿದರು.