i
ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಜಾಧವ್ ಗೆ ಪೌರ ಸನ್ಮಾನ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮೇ 1 ಕಾರ್ಮಿಕರ ದಿನಾಚರಣೆ ಅಂಗವಾಗಿ ಹಿರಿಯೂರು ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಜಾಧವ್ ಇವರು ಪೌರ ಕಾರ್ಮಿಕರಿಗೆ ತೋರುತ್ತಿರುವ ಅನುಕಂಪ ಹಾಗೂ ಸೇವಾ ಮನೋಭಾವದಿಂದ ಪೌರ ಕಾರ್ಮಿಕರನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಿದ್ದು ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ್ ಜಾದವ್ ಅವರು ಹಿರಿಯೂರು ಮುಖ್ಯರಸ್ತೆ, ಗಾಂಧಿ ವೃತ್ತದಿಂದ ಟಿ.ಬಿ.ಸರ್ಕಲ್ ವೃತ್ತದವರೆಗೆ ಹಾಗೂ ಹುಳಿಯಾರ್ ರಸ್ತೆಯನ್ನು ಅಗಲೀಕರಣ ಮಾಡುವ ಮೂಲಕ ಸಾರ್ವಜನಿಕರ ಓಡಾಟ, ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಒತ್ತು ನೀಡುವಂತೆ ಜೆಡಿಎಸ್ ಮುಖಂಡ ಹೆಚ್.ನಾಗರಾಜ್ ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹಿರಿಯೂರು ನಗರಸಭಾ ಕಚೇರಿಯಲ್ಲಿ ಗುರುವಾರ ಹಿರಿಯೂರು ತಾಲೂಕು ಜೆಡಿಎಸ್ ಮುಖಂಡರಾದ ಹೆಚ್.ನಾಗರಾಜ್, ಎಂ.ಡಿ.ರಮೇಶ್, ಕಂದಾಯಾಧಿಕಾರಿ ಜಬೀವುಲ್ಲಾ, ಸಿದ್ದೇಶ್ವರ ಟ್ರೇಡರ್ಸ್ ಮಾಲೀಕ ಬಿ.ಎಸ್.ಮಹೇಶ್ವರಪ್ಪ, ರಿಯಲ್ ಎಸ್ಟೇಲ್ ಉದ್ಯಮಿ ಮಂಜುನಾಥ್ ಪೂಜಾರಿ ಮತ್ತಿತರರು ಇದ್ದರು.