i
ಧರ್ಮ-ಸಂಸ್ಕೃತಿ, ಆದರ್ಶ ಮೌಲ್ಯಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ- ನಂಜಾವಧೂತ ಸ್ವಾಮೀಜಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತ ಆಧ್ಯಾತ್ಮಿಕ, ಸಾಂಸ್ಕೃತಿಕ, ನೈಸರ್ಗಿಕವಾಗಿ ಸಂಪತ್ಭರಿತ ದೇಶವಾಗಿದ್ದು, ಧರ್ಮ-ಸಂಸ್ಕೃತಿ, ಆದರ್ಶ ಮೌಲ್ಯಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.ತಾಲೂಕಿನ ಕೂನಿಕೆರೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ- ಕಳಸ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ಕೆ ಚಾಲನೆ ಮಾತನಾಡಿದರು.ಭಗವಂತನ ನಾಮ ಸ್ಮರಣೆ ಮಾಡಿದರೆ ಸಮಸ್ಯೆಗಳು ದೂರಾಗಿ ಎಲ್ಲವೂ ಶುಭವಾಗುತ್ತದೆ. ದೇವಾಲಯದಲ್ಲಿ ನಿರಂತರ ಧಾರ್ಮಿಕ ಚಟುವಟಿಕೆ ನಡೆದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ವೇದಾವತಿ ನದಿ ಪಾತ್ರದ ಕೂಗಳತೆ ದೂರದಲ್ಲಿರುವ ಇತಿಹಾಸ ಪ್ರಸಿದ್ದ ಆಂಜನೇಯ ಸ್ವಾಮಿ ದೇಗುಲ ಪ್ರಮುಖ ಧಾರ್ಮಿಕ-ಶಕ್ತಿ ಸ್ಥಳವಾಗಿದ್ದು. ಪ್ರಸಕ್ತ ವರ್ಷ ಭೀಕರ ಬರಗಾಲ ಕುಡಿವ ನೀರಿನ ಹಾಹಾಕಾರ, ಸೂರ್ಯನ ಪ್ರಖರ ತಾಪಕ್ಕೆ ಭೂಮಿ ಮೇಲಿನ ಸಕಲ ಜೀವ ರಾಶಿಗಳಿಗೆ ಸಂಕಷ್ಟ ಪರಿಸ್ಥಿತಿ ಎದುರಾಗಿದ್ದು, ಪರಿಶುದ್ಧ ಪ್ರಾರ್ಥನೆಯಿಂದ ಕರುಣಮಯಿ, ಸಕಲ ಜೀವಿಗಳ ರಕ್ಷಕ ಭಗವಂತನ ಅನುಗ್ರಹ- ವರುಣ ದೇವ ಕೃಪೆ ತೋರಿ ಸಕಲ ಜೀವರಾಶಿಗಳಿಗೆ ಒಳಿತನ್ನು ಕರುಣಿಸಲಿ ಎಂದರು.ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಶಿವಾನಂದ್, ಜಯಸಿಂಹ, ಶಿವರಾಂ, ಕೆ.ಸಿ.ಹೊರಕೇರಪ್ಪ, ವಸಂತ, ಹರಿಯಬ್ಬೆ ಹನುಮಂತರಾಯ, ಮಹೇಶ್ ಇತರರಿದ್ದರು.