i
ಸಮುದ್ರ ಮಂಥನ
ಚಂದ್ರವಳ್ಳಿ ನ್ಯೂಸ್, ದಾವಣಗೆರೆ;
ಸಮುದ್ರ ಮಂಥನ
ಅಲೆಗಳೇ
ಸಮುದ್ರದ
ಅಲೆಗಳೇ
ಕಡಲ ಅಳೆಗಳೇ
ನಿಮಗಿಲ್ಲಿ ಯಾರಿಲ್ಲ
ಸುಮ್ಮನೆ ಅಬ್ಬರಿಸಿ
ಭೋರ್ಗರೆವ ನೀವು
ಯಾರಿಗಾಗಿ ದಡ ಬಂದು
ಹೋಗುವಿರಿ
ಸಮುದ್ರವೇ
ಓ….ಸಮುದ್ರವೇ
ಅದೆಷ್ಟು ಸಂಭ್ರಮ
ನಿಮಗೆ , ನಿಮ್ಮ
ಬರುವಿಕೆಯ ಸದ್ದು
ವರ್ಷವಿಡೀ ಕೇಳುವುದು
ನಿಮ್ಮ ನೋಡುವ
ತವಕದೀ ನಾವಿರುವೆವು
ಸಮುದ್ರವೇ
ಓ….ಸಮುದ್ರವೇ
ಆ ಸೊಬಗು
ಆ ನವಿರು
ಚುಂಬಿಸಿ ಕಾಲಡಿಯ
ಸೆಳೆದು ನಿನ ಮಡಿಲಲಿ
ನಲಿದಾಡುವ ಮನಸಿಗೆ
ಮುದ ನೀಡಿ
ಮೈ ಯೆಲ್ಲ ಉಪ್ಪು ಮಾಡಿ
ಜಗದ ಹೊಲಸೆಲ್ಲ
ನಿನ್ನಡಿ ಇಳಿಸುವ
ಸಮುದ್ರವೇ
ಓ….ಸಮುದ್ರವೇ
ಸತ್ತವರ ಪಿಂಡದ
ಪ್ರೋಕ್ಷಣೆಯ ಸೇವಿಸಿ
ಪುಣ್ಯ ಗಿಟ್ಟಿಸುವೆ
ಮಾಟ ಮಂತ್ರದ
ಕೊಲೆ ಸುಲಿಗೆಯ
ದುರುಳತನಕೆ
ಮೂಕ ಸಾಕ್ಷಿಯಾಗುವ
ಸಮುದ್ರವೇ
ಓ….ಸಮುದ್ರವೇ
ಮುತ್ತು ರತ್ನಗಳ
ಜಲ ಜೀವರಾಶಿಯ
ಸಂಕುಲಕೆ ಜೀವ
ಬಳುವಳಿ ನೀಡಿ
ಸಾವಿರಾರು ಜನರ
ಬದುಕಿನ ಜೀವನಾಡಿಯಾದ
ಸಮುದ್ರವೇ
ಓ….ಸಮುದ್ರವೇ
ಅದೊಮ್ಮೆ ಆವಿಯಾಗಿ
ಆಕಾಶವ ಸೇರಿ
ಸಿಹಿ ನೀರಾಗಿ ಭೂ
ಒಡಲ ಬಸಿರಾಗಿಸಿ
ಹರಿವ ನದಿ ಝರಿಗಳಿಗೆ
ಉಸಿರಾಗಿ , ಮರಳಿ
ತನ್ನೊಡಲ ಸೇರಿಸಿ
ಕಾದಿದ್ದು ಸುನಾಮಿಯಾಗಿ
ಬಾಯಿ ಮುಕ್ಕಳಿಸಿ
ಜೀವನ ಮುರಾಪಟ್ಟು ಮಾಡುವ
ಸಮುದ್ರವೇ
ಓ….ಸಮುದ್ರವೇ
ಗುಜ್ಜರ್, ದಾವಣಗೆರೆ.