i
ಚಿತ್ರದುರ್ಗದ ಮೂಲದ ಖೈದಿ ನಾಪತ್ತೆ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ಜೈಲ್ನ ಕೈದಿ ಒಬ್ಬ ತಪ್ಪಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ದಾವಣಗೆರೆ ಜೈಲ್ನಲ್ಲಿ ಇತ್ತೀಚೆಗೆ ಅಷ್ಟೆ ದಾಖಲಾಗಿದ್ದ ಕಳ್ಳತನದ ಆರೋಪಿ ಎಸ್ಕೇಪ್ ಆಗಿರುವ ಬಗ್ಗೆ ದಾವಣಗೆರೆ ಮೂಲಗಳಿಂದ ವರದಿಯಾಗಿದೆ. ಚಿತ್ರದುರ್ಗದ ಮೂಲದ ಕಳ್ಳತನದ ಆರೋಪಿ ತೇಜು ಎಂಬಾತ. ಕಳೆದ ಏಪ್ರಿಲ್ 30 ರಂದು ದಾವಣಗೆರೆ ಜೈಲ್ನಲ್ಲಿ ಅಡ್ಮಿಷನ್ ಆಗಿದ್ದ. ಈತನ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಇವನನ್ನು ಸೇರಿದಂತೆ ಇಬ್ಬರು ಕೈದಿಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಆರೋಪಿ ತೇಜು ಎಸ್ಕೇಪ್ ಆಗಿದ್ದಾನೆ. ಈ ಸಂಬಂದ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.