i
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಶೋಕ್ ಎನ್ ನಾಯಕ್, ಹಿರಿಯ ವಕೀಲರು ಮತ್ತು ಶ್ರೀಮತಿ ಜಯನಾ ಕೊಠಾರಿ, ಹಿರಿಯ ವಕೀಲರು ಇವರುಗಳನ್ನು ದಂಡ ಪ್ರಕ್ರಿಯಾ ಸಂಹಿತೆ 1975ರ ಕಲಂ:24ರ ಉಪಕಲಂ(8)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ, (ಕೇಂದ್ರ ಅಧಿನಿಯಮ ಸಂಖ್ಯೆ:2/1974) ದಂಡ ಪ್ರಕ್ರಿಯಾ ಸಂಹಿತೆಯು ತಿದ್ದುಪಡಿಯಾದಂತೆ, (1978ರ ತಿದ್ದುಪಡಿ ಅಧಿನಿಯಮ) ಹಾಸನ ಜಿಲ್ಲೆ, ಹೊಳೆನರಸೀಪುರ ಟೌನ್ ಪೆÇಲೀಸ್ ಠಾಣೆ ಮೊ.ಸಂ:107/2024, ಸಿ.ಐ.ಡಿ ಪೆÇಲೀಸ್ ಠಾಣೆ ಮೊ.ಸಂ:20/2024, ಮೈಸೂರು ಜಿಲ್ಲೆ ಕೆ.ಆರ್.ನಗರ ಪೆÇಲೀಸ್ ಠಾಣೆ ಮೊ.ಸಂ:149/2024 ಮತ್ತು ಸರ್ಕಾರದ ಆದೇಶ ಸಂಖ್ಯೆ: ಒಇ 51 ಸಿಐಡಿ 2024, ದಿನಾಂಕ:28.04.2024 ರಂತೆ ಸಿ.ಐ.ಡಿ ಘಟಕದಲ್ಲಿ ರಚಿಸಿರುವ ವಿಶೇಷ ತನಿಖಾ ತಂಡದಿಂದ ದಾಖಲಾಗಿರುವ ಹಾಗೂ ಇನ್ನು ಮುಂದೆ ದಾಖಲಿಸಲಾಗುವ ಎಲ್ಲಾ ಪ್ರಕರಣಗಳಲ್ಲಿ ಸಂಬಂಧಪಟ್ಟ ಮಾನ್ಯ ವಿಚಾರಣಾ ಮತ್ತು ಜಿಲ್ಲಾ ಸತ್ರ ನ್ಯಾಯಾಲಯಗಳಲ್ಲಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರುಗಳನ್ನಾಗಿ ಮುಂದಿನ ಆದೇಶದವರೆಗೆ ಸರ್ಕಾರ ನೇಮಿಸಿ ಆದೇಶಿಸಿದೆ ಎಂದು ಒಳಾಡಳಿತ (ಪೊಲೀಸ್ ಸೇವೆಗಳು- ಬಿ)ಇಲಾಖೆಯ ಅಧೀನ ಕಾರ್ಯದಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.