![](https://www.chandravallinews.com/wp-content/uploads/2024/05/WhatsApp-Image-2024-05-12-at-9.23.31-PM.jpeg)
i
ಗೀತಾ ಗೆಲ್ಲುತ್ತಾರೆ, ಸೋಲುತ್ತಾರೆ ಎನ್ನುವವರು ಟ್ರ್ಯಾಕ್ಟರ್ ಗೆ ಟ್ರ್ಯಾಕ್ಟರ್ ಕಟ್ಟಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಚುನಾವಣೆಯ ಮತದಾನ ಮುಗಿದಿದ್ದರೂ ಫಲಿತಾಂಶ ಹೊರಬೀಳಲು 22 ದಿನ ಬಾಕಿ ಉಳಿದಿದೆ. ಈ ನಡುವೆ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಬಿಜೆಪಿ ಕಾಂಗ್ರೆಸ್ ಈಶ್ವರಪ್ಪ ಸೇರಿದಂತೆ 23 ಜನ ಸ್ಪರ್ಧಿಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳು ಒಳಗೊಳಗೆ ನಡೆದಿದೆ.
ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದ ರೈತ ರವೀಂದ್ರ ಗೀತಾ ಶಿವರಾಜ್ ಕುಮಾರ್ ಗೆಲ್ಲುವುದಾಗಿ ಟ್ರ್ಯಾಕ್ಟರ್ ಚಾಲೆಂಜ್ ಮಾಡಿದ್ದಾರೆ. ಬಿಜೆಪಿಯವರು ಗೆಲ್ಲುವುದಾದರೆ ಸವಾಲು ಸ್ವೀಕರಿಸಿ ಬನ್ನಿ. ನಾನು ಟ್ರ್ಯಾಕ್ಟರ್ ಚಾಲೆಂಜ್ ಹಾಕಿದ್ದೇನೆ. ನೀವು ಟ್ರ್ಯಾಕ್ಟರ್ ಚಾಲೆಂಜ್ ಸ್ವೀಕರಿಸಿ ಎಂದು ಸವಾಲು ಎಸೆದಿದ್ದಾನೆ.