![](https://www.chandravallinews.com/wp-content/uploads/2024/05/WhatsApp-Image-2024-05-14-at-8.15.33-PM.jpeg)
i
ವೈಯಕ್ತಿಕ ದ್ವೇಷಕ್ಕೆ ಮನೆಯನ್ನೇ ಸುಟ್ಟ ನೀಚರು!!
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಮನೆಗೆ ಬೆಂಕಿ ತಗುಲಿದ ಪ್ರಕರಣವೊಂದರ ಹಿಂದೆ ಉದ್ದೇಶ ಪೂರ್ವಕ ಕೃತ್ಯ ಇರುವ ಆರೋಪವೊಂದು ಕೇಳಿಬಂದಿದೆ.
ಸಾಗರ ತಾಲ್ಲೂಕು ಕಾರ್ಗಲ್ನಲ್ಲಿ ಕಳೆದ ಭಾನುವಾರ ಮನೆಯೊಂದಕ್ಕೆ ಬೆಂಕಿ ತಗುಲಿ ಸುಮಾರು ಆರು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಹೋಗಿದ್ದವು. ಇದೀಗ ಈ ಘಟನೆಗೆ ವೈಯಕ್ತಿಕ ದ್ವೇಷ ಕಾರಣ ಎಂದು ಆರೋಪಿಸಲಾಗಿದೆ.
ಹಣಕಾಸಿನ ವಿಷಯದಲ್ಲಿ ಉಂಟಾಗಿದ್ದ ವೈಯಕ್ತಿಕ ದ್ವೇಷಕ್ಕಾಗಿ ಜೋಗದ ಟಿ.ಎಂ.ಶೆಡ್ ನಿವಾಸಿ ದೇವಿಕಾ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಂಚಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ‘ದೇವಿಕಾ ಅವರು ಊರಿನಲ್ಲಿಲ್ಲದ ವೇಳೆ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದ್ದಾರೆ. ನೆರೆಮನೆ ನಿವಾಸಿಗಳು ಬೆಂಕಿ ನೋಡಿ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಯಿಸಿ , ಸಂಪೂರ್ಣ ಹಾನಿಯಾಗುವುದನ್ನ ತಪ್ಪಿಸಿದ್ದಾರೆ.
ಘಟನೆ ಸಂಬಂಧ ಕಾರ್ಗಲ್ಜೋಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.