![](https://www.chandravallinews.com/wp-content/uploads/2024/05/WhatsApp-Image-2024-05-16-at-5.36.58-PM-2-1024x1179.jpeg)
i
21 ವರ್ಷದ ಯುವಕ ಪುನೀತ್ ಕಣ್ಮರೆ ಹಾಗೂ ಅನಾಮಧೇಯ ಶವ ಪತ್ತೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಕೋಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಯುವಕ ಕಾಣೆಯಾದ ಹಾಗೂ ಅನಾಮಧೇಯ ಶವ ದೊರೆತ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ನಗರದ ಕೋಟೆ ಬಡಾವಣೆಯ ಪುನೀತ್ ತಂದೆ ಲೇಟ್ ರಮೇಶ್ (21 ವರ್ಷ) ಕಾಣೆಯಾಗಿದ್ದಾನೆ. ಈ ಕುರಿತು ಮೇ.2 ರಂದು ಪ್ರಕರಣ ದಾಖಲಿಸಲಾಗಿದೆ. ಪುನೀತ್ ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡುಮುಖ, ಸುಮಾರು 6 ಅಡಿ ಎತ್ತರವಿದ್ದು, ತಲೆಯ ಬಲಭಾಗದಲ್ಲಿ ಹಳೆಯಗಾಯದ ಗುರುತು ಇದೆ, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬ್ಲೂ ಕಲರ್ ಜೀನ್ಸ್ ಪ್ಯಾಂಟ್, ಬ್ಲೂ ಕಲರ್ ವೈಟ್ ಮಿಕ್ಸ್ ಚೆಕ್ಸ್ ಶರ್ಟ್ ಧರಿಸಿರುತ್ತಾನೆ.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಶೌಚಾಲಯ ಪಕ್ಕದಲ್ಲಿ ಸುಮಾರು 60-70 ವರ್ಷದ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ. ಈ ಕುರಿತು ಮೇ.15 ರಂದು ನಗರದ ಕೋಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯು ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಸು.5.3 ಅಡಿ ಎತ್ತರ, ತಲೆಯಲ್ಲಿ 2 ಇಂಚು ಉದ್ದ ಬಿಳಿ ಕೂದಲು, ಮುಖದಲ್ಲಿ ಬಿಳಿ ಗಡ್ಡ ಹೊಂದಿರುತ್ತಾನೆ. ಮೈಮೇಲೆ ಬಿಳಿ ಬಣ್ಣದ ಕಪ್ಪು ಗೆರೆಯುಳ್ಳ ತೋಳಿನ ಶರ್ಟ್, ಕಪ್ಪು ಬಣ್ಣದ ಡ್ರಾಯರ್, ಕೆಂಪು ಬಣ್ಣದ ಉಡಿದಾರ ಧರಿಸಿರುತ್ತಾರೆ. ಮೃತ ವ್ಯಕ್ತಿಯ ವಾರಸುದಾರರು ಪತ್ತೆಯಾಗದ ಕಾರಣ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರ ಕೊಠಡಿಯ ಶೈಥ್ಯಾಗಾರದಲ್ಲಿರಿಸಲಾಗಿದೆ.
ಯುವಕನ ಹಾಗೂ ಮೃತ ವೃದ್ಧ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ, ಕೋಟೆ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ದೂರವಾಣಿ ಸಂಖ್ಯೆ: 08194-222933, 9480803145, ಚಿತ್ರದುರ್ಗ ಉಪವಿಭಾಗ ಪೊಲೀಸ್ ಉಪಾಧೀಕ್ಷಕರ ದೂರವಾಣಿ ಸಂಖ್ಯೆ 08194-222430, 9480803120, ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ: 08194-222782 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.