![](https://www.chandravallinews.com/wp-content/uploads/2024/05/images-33.jpeg)
i
ದುಡ್ಡಿಗಾಗಿ ಅಜ್ಜಿಯನ್ನು ಕೊಲೆ ಮಾಡಿದ ಮೊಮ್ಮಗ…
ಚಂದ್ರವಳ್ಳಿ ನ್ಯೂಸ್, ಭದ್ರಾವತಿ :
ಹಣಕ್ಕಾಗಿ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಭದ್ರಾವತಿಯ ಅಂತರಗಂಗೆಯಲ್ಲಿ ನಡೆದಿದೆ.
ಅಂತರಗಂಗೆಯ ಭೋವಿಕೇರಿಯಲ್ಲಿ ರಾಮಕ್ಕ (72 ) ನನ್ನು ಮೊಮ್ಮಗನೇ ಹೊಂಚು ಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಅಜ್ಜಿಯ ಸೊಂಟದಲ್ಲಿದ್ದ 20 ಸಾವಿರ ರೂ ಮತ್ತು ಕಿವಿ ಓಲೆ ಕಿತ್ತುಕೊಂಡು ಹೋಗಿದ್ದಾನೆ.
ಈ ಸಂಬಂಧ ಮೊಮ್ಮಗ ಚೇತನ್, ಭರತ್, ರೋಹಿತ್, ಆದರ್ಶ ವಿರುದ್ಧ ದೂರು ದಾಖಲಾಗಿದೆ.
ರಾಮಕ್ಕನವರ ಮಗ ಗೋವಿಂದ ಜೆಸಿಬಿ ಖರೀದಿಸಿದ್ದು, ಅದರ ಸಾಲದ ಕಂತು ಕಟ್ಟಲು ಅಮ್ಮನ ಬಳಿ 20 ಸಾವಿರ ಕಂತು ಹಣ ನೀಡಿ ಗೋವಿಂದ ದಾವಣಗೆರೆಗೆ ಹೋದಾಗ ಈ ಕೊಲೆ ಸಂಭವಿಸಿದೆ.
ಈ ಕೊಲೆಗೆ ಚೇತನ್, ಭರತ್, ರೋಹಿತ್, ಆದರ್ಶ ಕಾರಣವೆಂದು ಗೋವಿಂದ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚೇತನ್ ರಾಮಕ್ಕನವರ ಮಗ ಹನುಮಂತಪ್ಪನ ಮಗ ಆಗಿದ್ದಾನೆ. ಮೈತುಂಬ ಸಾಲ ಮಾಡಿಕೊಂಡಿದ್ದ ಚೇತನ್ ಅಜ್ಜಿಯ ಬಳಿ ಹಣವಿರುವುದನ್ನು ಗಮನಿಸಿದ್ದನು. ತಂದೆ ಹನುಮಂತಪ್ಪನವರನ್ನು ಸ್ನೇಹಿತರೊಂದಿಗೆ ಪಾರ್ಟಿಗೆ ಕಳುಹಿಸಿ ಅಜ್ಜಿ ಮಲಗಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ದೂರಿನಿಂದ ತಿಳಿದು ಬಂದಿದೆ.