![](https://www.chandravallinews.com/wp-content/uploads/2024/06/IMG_20240611_062807-1024x467.jpg)
i
ಪತ್ರಿಕಾ ಸಂಪಾದಕರ ಮನವಿಗೆ ಸ್ಪಂದಿಸಿದ ಸರ್ಕಾರ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಥಳೀಯ ಮತ್ತು ಪ್ರಾದೇಶಿಕ ಕನ್ನಡ ದಿನಪತ್ರಿಕೆಗಳ ಉಳುವಿಗೆ ಎಲ್ಲಾ ಸಂಪಾದಕರು ಸಂಘಟಿತರಾಗ ಬೇಕು ಮತ್ತು ಇಲಾಖೆ ನೀಡವ ಜಾಹೀರಾತು ಹಾಗೂ ಸೌಲಭ್ಯಗಳನ್ನು ಕಾಲಕಾಲಕ್ಕೆ ನೀಡುವಂತೆ ಇಲಾಖೆ ಮತ್ತು ಸರ್ಕಾರ ವನ್ನು ಒತ್ತಾಯಿಸ ಬೇಕೆಂದು ಕನ್ನಡ ದಿನ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ತಿಳಿಸಿದರು.
ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕನಾ೯ಟಕ ಕಾಯ೯ನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಪದಾಧಿಕಾರಿಗಳ 3ನೆಯ ಕಾರ್ಯಕಾರಿ ಸಮಿತಿ ಸಭೆಯ ನಡೆಯಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ನಂತರದ ದಿನಗಳಲ್ಲಿ ಸ್ಥಳೀಯ ಪತ್ರಿಕೆ ಗಳ ಪರಿಸ್ಥಿತಿ ದಿನೇ ದಿನೇ ಶೋಚನೀಯ ಅಂತಕ್ಕೆ ತಲುಪಿದ್ದರು ಪತ್ರಿಕೆಗಳ ಸಂಕಷ್ಟ ತಿಳಿಯದ ಅಧಿಕಾರಿಗಳು ಪ್ರಸಾರ ಸಂಖ್ಯೆ ಮತ್ತು ನಿಯಮಿತವಾಗಿ ಪ್ರಕಟವಾಗುತ್ತಿರುವ ಕುರಿತು ಜಿಲ್ಲಾ ಮಾದ್ಯಮ ಸಮಿತಿಗಳಿಂದ ಪರಿಶೀಲಾನ ವರದಿ ತರಿಸಿಕೊಳ್ಳಲು ತರಾತುರಿಯಲ್ಲಿ ಆದೇಶ ಮಾಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ ಇಂತ ಸಂಕಷ್ಟ ಪರಿಸ್ಥಿತಿ ಅರಿತ ರಾಜ್ಯದ ಎಲ್ಲಾ ಜಿಲ್ಲೆಗಳ ಸಂಪಾದಕರು ಒಟ್ಟಾಗಿ ಸಭೆಯಲ್ಲಿ ಪಾಲ್ಗೊಂಡು ಸರ್ಕಾರದ ಆದೇಶವನ್ನು ಖಂಡಿಸುವ ನಿರ್ಣಯ ಕೈಗೊಂಡು ಸಭೆಗೆ ತಿಳಿಸಿದರು.
ಸರ್ಕಾರದ ಕಾರ್ಯಕ್ರಮ ಯೋಜನೆಗಳು ನೀತಿ ನಿಯಮಗಳು ಮತ್ತು ಎಲ್ಲಾ ಇಲಾಖೆಯ ಮಾಹಿತಿಗಳನ್ನು ಸಾರ್ವಜನಿಕರಿಗೆ ಮುಟ್ಟಿಸಲು ಪುಟಗಟ್ಟಲೇ ಸುದ್ದಿಗಳನ್ನು ಪ್ರಸಾರಮಾಡಿ ಸರ್ಕಾರದ ಘನತೆ ಗೌರವ ಹೆಚ್ಚಿಸಿದ್ದರು ಸ್ಥಳೀಯ ಪತ್ರಿಕೆಗಳ ಮೇಲೆ ಗದಪ್ರಹಾರ ಮಾಡಿದ್ದು ವಿಷಾದನೀಯ ಕಾರ್ಯವಾಗಿದೆ.
ಆದರೆ ರಾಜ್ಯ ಮಟ್ಟದ ಪತ್ರಿಕೆ ಗಳು ಸರ್ಕಾರದ ಕಾರ್ಯಕ್ರಮದ ಸುದ್ದಿ
ಗಳನ್ನು ಪ್ರಚಾರ ಮಾಡಲು ವಿಫಲವಾಗಿವೆ ಆದರೂ ರಾಜ್ಯ ಸರ್ಕಾರ ಪುಟಗಟ್ಟಲೆ ಅಂತಹ ಪತ್ರಿಕೆಗಳಿಗೆ ವಿಶೇಷ ಜಾಹೀರಾತು, ವರ್ಗೀಕೃತ ಜಾಹೀರಾತು, ಇಲಾಖೆವಾರು ಅನುಷ್ಠಾನ ಮಾಡಿದ ವಿಷಯಗಳ ಕುರಿತು ವಿಶೇಷ ಜಾಹೀರಾತುಗಳನ್ನು ಹತ್ತಾರು ಪುಟಗಟ್ಟಲೇ ನೀಡುತ್ತಿರುವುದು ಸಂತೋಷದಾಯಕವಾದರು ಇದೇ ಜಾಹೀರಾತುಗಳನ್ನು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆ ಗಳಿಗೆ ನೀಡದೆ ತಾರತಮ್ಯ ಮಾಡುವು ಅತ್ಯಂತ ಖಂಡನೀಯ ಎಂದು ಬಹುತೇಕ ಸಂಪಾದಕರು ಬೇಸರ ವ್ಯಕ್ತಪಡಿಸಿದರು.
ಇದೇ ರೀತಿಯ ತಾರತಮ್ಯ ಮುಂದುವರಿದರೇ ಮುಂದಿನದಿನಗಳಲ್ಲಿ ಉಗ್ರರೀತಿಯ ಹೋರಾಟಕ್ಕಾಗಿ ಮುಂದಾಗ ಬೇಕಾಗುತ್ತದೆ ಎಂದು ಸಭೆ ನಿರ್ಣಯಿಸಿತು. ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ವಿರುದ್ಧ ಅವೈಜ್ಞಾನಿಕ ವಾಗಿ ಹೊರಡಿಸಿರುವ ಆದೇಶಗಳನ್ನು ಹಿಂಪಡೆಯಲು ಒತ್ತಾಯಿಸಲಾಯಿತು.
ಸಭೆಯ ನಂತರ ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತ ರಾದ ಸೂರಳ್ ಕರ ವಿಕಾಸ ಕಿಶೋರ್ ಅವರನ್ನು ಭೇಟಿಮಾಡಿದ ಪತ್ರಿಕೆಗಳ ಸಂಪಾದಕರ ನಿಯೋಗವು ಸಮಸ್ಯೆಗಳ ಕುರಿತು ಮಾಡಿದ ಮನವಿಗೆ ಸ್ಪಂದಿಸಿ ಅವೈಜ್ಞಾನಿಕ ಆದೇಶಗಳನ್ನು ರದ್ದುಗೊಳಿಸಿ ಮರು ಆದೇಶ ಮಾಡಿದ್ದಾರೆ.
ಸಭೆಗಿಂತ ಮೊದಲು ಕೋಲಾರ ಘಟಕದವರು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆವಿ.ಪ್ರಬಾಕರ್ ರವರನ್ನು ಭೇಟಿ ಮಾಡಿ ಅವೈಜ್ಞಾನಿಕ ಆದೇಶ ರದ್ದುಪಡಿಸುವಂತೆ ಕೋರಿದ್ದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಪದ್ಮಾನಾಗರಾಜ್,ಮಂಜುನಾಥ ಅಬ್ಬಿಗೆರೆ,ಅನೂಪ್ ಪ್ರಧಾನ ಕಾರ್ಯದರ್ಶಿ ಪಿ.ಚನ್ನಬಸವ ಬಾಗಲವಾಡ, ಕಾರ್ಯದರ್ಶಿ ದಿನೇಶ್ ಗೌಡಗೆರೆ, ಖಜಾಂಚಿ ಖಾನ್ ಸಾಬ್, ರಾಜ್ಯ ಸಮಿತಿ ಸದಸ್ಯ ಸಿಎನ್ ಕುಮಾರ್, ಚಿತ್ರದುರ್ಗ ಜಿಲ್ಲೆಯ ಸಂಪಾದಕರ ಸಂಘದ ಅಧ್ಯಕ್ಷ ರವಿ ಮಲ್ಲಾಪುರ, ಸಂಪಾದಕ ಸಿ.ಹೆಂಜಾರಪ್ಪ, ವಿವಿಧ ಪದಾಧಿಕಾರಿಗಳು ಜಿಲ್ಲಾ ಸಂಪಾದಕರು ಇದ್ದರು.