i
ಹಿರಿಯೂರು ತಾಲೂಕಿನ ಗೂಳ್ಯ ಗ್ರಾಮದ ತಿಪ್ಪಮ್ಮ ಕೃಷ್ಣಮೂರ್ತಿ ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕು ಧರ್ಮಪುರ ಹೊಬಳಿ ಗೂಳ್ಯ ಗ್ರಾಮದ ನಿವಾಸಿ ತಿಪ್ಪಮ್ಮ ಕೋಂ ಲೇಟ್ ಕೃಷ್ಣಮೂರ್ತಿ (35) ಇವರು ಚಿತ್ರದುರ್ಗ ನಗರದ ಸರಸ್ವತಿಪುರಂನಲ್ಲಿ ವಾಸಾಗಿದ್ದರು. ಎಸ್.ಆರ್.ಎಸ್ ಕಾಲೇಜಿನಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ದಿನಾಂಕ 10-11-2022 ರಂದು ಚಿತ್ರದುರ್ಗದಿಂದ ಗೂಳ್ಯದಲ್ಲಿನ ತಮ್ಮ ದೊಡ್ಡಪ್ಪ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಯಾರ ಸಂಪರ್ಕಕ್ಕೂ ಬರದೆ ನಾಪತ್ತೆಯಾಗಿದ್ದಾರೆ. ಇವರ ಚಹರೆ ಇಂತಿದೆ: ಮನೆಯಿಂದ ಹೊರಡುವಾಗ ಆರೆಂಜ್ ಕಲ್ಲರ್ ಚೂಡಿದಾರ್, ಗೋಲ್ಡನ್ ಕಲರ್ ವೇಲು ಧರಿಸಿರುತ್ತಾರೆ. ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧರಣ ಮೈಕಟ್ಟು, ಗುಂಗೂರು ಕಪ್ಪು ಕೂದಲು, 5 ಅಡಿ ಎತ್ತರ ಇದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಲಗೈಯಲ್ಲಿ ಕಿಟ್ಟಿ ಎಂಬ ಅಚ್ಚೆ ಗುರುತು ಇರುತ್ತದೆ. ಇವರು ಪತ್ತೆ ಕಂಡುಬಂದರೆ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸುವಂತೆ ಪ್ರಕಟಣೆ ತಿಳಿಸಿದೆ.