i
ಲೋಕಾಯುಕ್ತ ದಾಳಿ, ಇಬ್ಬರು ಭೂ ಸ್ವಾಧೀನಾಧಿಕಾರಿಗಳ ಬಂಧನ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕೈಗಾರಿಕಾ ಇಲಾಖೆ ಭೂಸ್ವಾಧೀನಾಧಿಕಾರಿಗಳಿಬ್ಬರು ಲೋಕಾಯುಕ್ತ ದಾಳಿ ವೇಳೆ ಬಂಧನಕ್ಕೆ ಒಳಗಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಕೈಗಾರಿಕಾ ಇಲಾಖೆ ಭೂಸ್ವಾಧೀನ ಅಧಿಕಾರಿ ಜಿ.ಡಿ ಶೇಖರ್ ಮತ್ತು ಶಿರೆಸ್ತೇದಾರ ಶ್ರೀನಿವಾಸ್ ಇಬ್ಬರು ಲಂಚ ಸ್ಪೀಕರಿಸುವಾಗ ಲೋಕಯುಕ್ತರು ದಾಳಿ ಮಾಡಿ ಬಂಧಿಸಿದ್ದಾರೆ.
ಸರ್ಕಾರದ ಯೋಜನೆಗೆ ಕೋಳುರ ಬಳಿ ಗುಂಡಪ್ಪ ಎಂಬುವರ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಜಮೀನಿಗೆ ಪರಿಹಾರದ ಹಣ ನೀಡಲು 30 ಸಾವಿರ ಲಂಚ ಪಡೆಯುತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಲೊಕಾಯುಕ್ತ ಎಸ್ಪಿ ಎಂ ಎಸ್ ಕೌಲಾಂಪುರೆ ನೇತೃತ್ವದಲ್ಲಿ ಡಿವೈಸ್ಪಿ ರಾಮಕೃಷ್ಣ, ಸಿಪಿಐ ಆಂಜನೇಯ ಸೇರಿ ಇತರ ಅಧಿಕಾರಿಗಳು ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಇಬ್ಬರು ಆರೋಪಿ ಅಧಿಕಾರಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.