i
ಬಂಜಾರ ಸಮುದಾಯದ ಅಧಿಕಾರಿ ಮತ್ತು ಜನರನ್ನು ಹತ್ತಿಕ್ಕುತ್ತಿರುವ ಶಾಸಕ ಎಂ.ಚಂದ್ರಪ್ಪಗೆ ತಕ್ಕ ಪಾಠ…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ: mla chndrappa vs lambani
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪನವರು ಲಂಬಾಣಿ ಸಮಾಜವನ್ನು ಟಾರ್ಗೆಟ್ ಮಾಡಿ ಶೋಷಣೆ ಮಾಡುತ್ತಿರುವುದರ ವಿರುದ್ಧ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಲಂಬಾಣಿ ಸಂಘ ಸಂಸ್ಥೆಗಳು ಆಕ್ರೋಶ ವ್ಯಕ್ತ ಪಡಿಸಿವೆ.
ಬಿ.ವಿ.ಜಗದೀಶ್ ರವರು ಫೆಬ್ರವರಿ ೨೮ರಂದು ಭದ್ರಾ ಮೇಲ್ದಂಡೆ ಯೋಜನೆ ಇಲಾಖೆಯ ಮುಖ್ಯ ಅಭಿಯಂತರರಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಕೇವಲ ೨೮ ದಿನಗಳಾಗಿರುತ್ತದೆ. ಹೀಗಿರುವಾಗ ಹೊಳಲ್ಕೆರೆ ಶಾಸಕರಾದ ಎಂ.ಚಂದ್ರಪ್ಪನವರು ತಮ್ಮ ಅನುಕೂಲಕ್ಕೆ ಸಹಕರಿಸುವ ನಿಟ್ಟಿನಲ್ಲಿ ಆ ಸ್ಥಾನಕ್ಕೆ ಸದರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧೀಕ್ಷಕ ಅಭಿಯಂತರರಾಗಿರುವವರನ್ನು ಮುಖ್ಯ ಅಭಿಯಂತರರಾಗಿ ನಿಯೋಜನೆ ಮಾಡಿರುತ್ತಾರೆ ಈ ಹಿಂದೆ ಶಾಸಕರಾಗಿರುವ ಸಮಯದಲ್ಲೂ ಬಂಜಾರ ಸಮುದಾಯದ ಅಧಿಕಾರಿಗಳಿಗೆ ಕಿರುಕುಳ ಅನ್ಯಾಯ ಶೋಷಣೆ ಮಾಡುತ್ತಾ ಬಂದಿರುತ್ತಾರೆ. ಈಗಲೂ ಅವರ ಈ ಧೋರಣೆ ಮುಂದುವರೆಯುತ್ತಾ ಬಂದಿರುತ್ತದೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಕ್ಕೆ ಬಂಜಾರ ಸಮುದಾಯದ ಹಲವರು ವಿಧಾನಸಭಾ ಚುನಾವಣೆಯ ಆಕಾಂಕ್ಷಿಗಳಾಗಿರುತ್ತಾರೆ. ಈ ವಿಷಯವು ಸಹ ಚಂದ್ರಪ್ಪನವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಉದ್ದೇಶದಿಂದ ಬಂಜಾರ ಸಮುದಾಯದವರನ್ನು ತಮ್ಮ ರಾಜಕೀಯ ದ್ವೇಷದ ಮೂಲಕ ಹತ್ತಿಕ್ಕಲು ಪ್ರಯತ್ನಿಸಿರುತ್ತಾರೆ ಎಂದು ಬಂಜಾರ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರಾಮಾನಾಯ್ಕ್ ಗಂಭೀರ ಆರೋಪ ಮಾಡಿದ್ದಾರೆ.
ಹೊಳಲ್ಕೆರೆ ತಾಲ್ಲೂಕಿನ ತಾಂಡಗಳಲ್ಲಿ ಆಯೋಜಿಸಲು ಇಚ್ಛಿಸಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯವನ್ನು ದಿಢೀರ್ ರದ್ದು ಮಾಡುವ ಮೂಲಕ ತಾಂಡಗಳ ಜನರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದಂತೆ ಶಾಸಕ ಎಂ.ಚಂದ್ರಪ್ಪ ಮಾಡಿದ್ದಾರೆಂದು ಅವರು ಕಿಡಿ ಕಾರಿದ್ದಾರೆ.
ಭದ್ರಾ ಮೇಲ್ದಂಡೆ ಇಲಾಖೆಯಲ್ಲಿ ಶಾಸಕ ಚಂದ್ರಪ್ಪನವರ ಕೋಟಿಗಟ್ಟಲೆ ಕಾಮಗಾರಿಗಳು ಬಿಲ್ಗಳ ಪಾವತಿ ಬಾಕಿಯಿರುವುದರಿಂದ ತಮಗೆ ಸಹಕರಿಸುವಂತಹ ಅಧಿಕಾರಿಗೆ ಮುಖ್ಯ ಅಭಿಯಂತರರ ಸ್ಥಾನಕ್ಕೆ ತಮ್ಮ ರಾಜಕೀಯ ಶಕ್ತಿ ಬಳಸಿ ಮತ್ತೊಬ್ಬರನ್ನು ನಿಯೋಜಿಸಿ ತಮ್ಮ ದ್ವೇಷವನ್ನು ಈ ಮೂಲಕ ವ್ಯಕ್ತಪಡಿಸಿರುತ್ತಾರೆ.
ಆದ್ದರಿಂದ ಬಿ.ವಿ.ಜಗದೀಶ್ರವರು ಇಲಾಖೆಯಲ್ಲಿ ಒಳ್ಳೆಯ ಹೆಸರನ್ನು ಪಡೆದಿರುತ್ತಾರೆ ಆದ ಪ್ರಯುಕ್ತ ಇವರನ್ನು ಚಿತ್ರದುರ್ಗ ಭದ್ರಾ ಮೇಲ್ದಂಡೆ ಯೋಜನೆಗೆ ಮುಖ್ಯ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸಲು ಮರು ನಿಯೋಜನೆ ಮಾಡಬೇಕೆಂದು ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಇವರ ಮುಖಾಂತರ ಗೋವಿಂದ ಕಾರಜೋಳ ರವರು ಜಲ ಸಂಪನ್ಮೂಲ ಇಲಾಖೆ ಸಚಿವರು ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು ಇವರಿಗೆ ಪತ್ರ ರವಾನೆ ಮಾಡಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀನಂದಮಸಂದ್ ಸೇವಲಾಲ್ ಸ್ವಾಮಿಗಳು, ಕನ್ನಡ ಸೇನೆ ಅಧ್ಯಕ್ಷ ರಮೇಶ್, ವಕೀಲ ವೆಂಕಟೇಶ್ನಾಯ್ಕ್, ಎ.ಐ.ಬಿ.ಎಸ್.ಎಸ್ ಜಿಲ್ಲಾಧ್ಯಕ್ಷ ವಸಂತ್, ರಮೇಶ್ರಾಮವತ್, ಪರಮೇಶ್ನಾಯ್ಕ್, ಜಯರಾಮ್ನಾಯ್ಕ್, ಶ್ರೀನಿವಾಸ್ನಾಯ್ಕ್ ಇನ್ನು ಇತರರು ಉಪಸ್ಥಿತರಿದ್ದರು.