i
ಸಾಮಾಜಿಕ ನ್ಯಾಯದಡಿ ಸಾಮಾನ್ಯ ವರ್ಗಕ್ಕೆ ಟಿಕೆಟ್ ನೀಡಿರುವ ನಿರ್ಧಾರ ಸರಿ…
ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಹೊಸದುರ್ಗ ವಿಧಾನಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದ್ದು ಪರಿಶಿಷ್ಟ ಜಾತಿಯ ವ್ಯಕ್ತಿ ಟಿಕೆಟ್ ಕೇಳಿದ್ದೇ, ಆದರೆ ಸಾಮಾನ್ಯ ವರ್ಗದವರಿಗೆ ಸಹಜವಾಗಿ ತೀರ್ಮಾನ ಮಾಡಿ ಟಿಕೆಟ್ ನೀಡಲಾಗಿದೆ ಎಂದು ಬಿಜೆಪಿ ಟಿಕೆಟ್ ವಂಚಿತ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದರು.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಸಾಮಾಜಿಕ ನ್ಯಾಯ ಎಂಬ ನಿರ್ಣಯ ಮಾಡಿದೆ, ನಿರ್ಧಾರ ಸರಿ. ನಾನು ಪರಿಶಿಷ್ಟ ಜಾತಿ ವ್ಯಕ್ತಿ, ಇಲ್ಲಿ ಸ್ಪರ್ಧೆ ಮಾಡಿ ಗೆಲ್ಲೋದು ಕೂಡಾ ಒಂದು ಚಾಲೆಂಜ್ ಇದೆ. ನಾನು ಇಲ್ಲಿಗೆ ಬಂದಿದ್ದು, ಇಲ್ಲಿಯ ತನಕ ಇರೋದು, ನಾಳೆ ಇರೋದು ನೇರ ನುಡಿಯಿಂದ ಎಂದು ತಿಳಿಸಿದರು.
ಇಂಧನ ಇಲಾಖೆ, BDA, ಭದ್ರಾ ಮೆಲ್ದಂಡೆ ಭ್ರಷ್ಟಾಚಾರ ವಿಚಾರ ಪ್ರಸ್ತಾಪ ಮಾಡಿ ಪತ್ರ ಬರೆದಿದ್ದು ಟಿಕೆಟ್ ಗೂ ಯಾವುದೇ ಸಂಬಂಧವಿಲ್ಲ. ನಮ್ಮ ಸರ್ಕಾರದ್ದು ಮಾತ್ರವಲ್ಲ, ಎಲ್ಲಾ ಸರ್ಕಾರಗಳ ಟೆಂಡರ್ ಮಾಡಿದ್ದರು ಎಂದು ತಿಳಿಸಿದ್ದೆ. ವರಿಷ್ಠರು ಇಕ್ಕಟ್ಟಿನ ಸ್ಥಿತಿಗೆ ಸಿಲುಕಿದ್ದರು. ಲಿಂಗಾಯತ ವಿರೋಧಿ ಎಂದು ಕೆಲ ಲೀಡರ್ ಗಳು ಮಾತ್ರ ಹೇಳ್ತಿದ್ದಾರೆ. ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ನೋಡಿ, ನಾನು ಲಿಂಗಾಯತ ವಿರೋಧಿಯಲ್ಲ. ಲಿಂಗಾಯತ ವಿರೋಧಿ ಎಂಬುದು ಸುಳ್ಳು, ನನ್ನ ಪರ ಇದ್ದಾರೆ. ಯಡಿಯೂರಪ್ಪ ಆಪ್ತ ಲಿಂಗಮೂರ್ತಿ ಹೀಗಾಗಿ ಅವರಿಗೆ ಟಿಕೆಟ್ ಸಿಕ್ಕಿದ್ದು ನನಗೆ ಟಿಕೆಟ್ ತಪ್ಪಿದೆ ಇದರಲ್ಲಿ ಬೇಸರವಿಲ್ಲ ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ಭೇಟಿ ಮಾಡಿದ್ದೆ, ಚರ್ಚೆ ಮಾಡಿದ್ದೇನೆ. ಪಕ್ಷೇತರ ಹೋಗಬೇಕೆ, ಅಥವಾ ಪಕ್ಷದ ಸಿಂಬಲ್ ಮೇಲೆ ಹೋಗಬೇಕೆ ಎಂದು ನಿರ್ಧಾರ ಮಾಡಬೇಕಿದೆ. ಆದರೆ ಸ್ಪರ್ಧೆ ಮಾಡುವುದು ಖಚಿತ. ಜನಾರ್ದನ ರೆಡ್ಡಿ ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಸಿಎಂ ಹಾದಿಯಾಗಿ ನನ್ನ ಪರ ಇದ್ದರು. ಕ್ಷೇತ್ರಕ್ಕೆ ಅಪಾರ ಅಭಿವೃದ್ಧಿಗೆ ಸಿಎಂ ಸೇರಿ ಹಲವು ಮಂತ್ರಿಗಳು ಸಹಕಾರ ಮಾಡಿದ್ದಾರೆ. ಪಕ್ಷ ಎಲ್ಲಿವರೆಗೂ ಇಟ್ಟುಕೊಳ್ಳುತ್ತದೆ ಅಲ್ಲಿವರೆಗೂ ಇರುವೆ ಎಂದು ಹಿಂದೆ ಹೇಳಿದ್ದೆ. ಬೃಹದಾಕಾರವಾಗಿ ಬೆಳೆದ ಪಕ್ಷ ರಾಜ್ಯದಲ್ಲಿ ಟಿಕೆಟ್ ನಿರ್ಣಯ ಮಾಡಲು ಆಗುತ್ತಿಲ್ಲ. ಕೇಂದ್ರದ ನಾಯಕರು ನಮ್ಮ ಜೊತೆ ಇದ್ದರು ಕೂಡಾ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಗೂಳಿಹಟ್ಟಿ ಶೇಖರ್ ಹೇಳಿದರು.