i
ಲೋಕಕಲ್ಯಾಣಾರ್ಥ ಮಹಾ ಚಂಡಿಕಾ ಹೋಮ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಸುಪ್ರಸಿದ್ಧ ಓಂ ಶಕ್ತಿ ಶ್ರೀ ಅರ್ಧನಾರೀಶ್ವರಿ ಕರುಮಾರಿಯಮ್ಮ ದೇವಾಲಯದಲ್ಲಿ 20ನೇ ವರ್ಷದ ವರ್ಧಂತುತ್ಸವದ ಅಂಗವಾಗಿ ಶುಕ್ರವಾರ ಮಧ್ಯಾನ ಲೋಕ ಕಲ್ಯಾಣಾರ್ಥವಾಗಿ ಮಹಾ ಚಂಡಿಕಾ ಹೋಮ ನಡೆಯಿತು. ಇದರ ಅಂಗವಾಗಿ ಗಂಗಾ ಪೂಜೆ, ಗಣಪತಿ ಪೂಜೆ, ನವಗ್ರಹ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಹಾ ಕುಂಭಾಭಿಷೇಕ ನಡೆಯಿತು. ಮಹಾ ಚಂಡಿಕಾ ಹೋಮದ ನಂತರ ಪೂರ್ಣಾಹುತಿ ನಡೆಯಿತು. ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನದಾಸೋಹ ಕಾರ್ಯಕ್ರಮ ನಡೆಯಿತು. ನಂತರ ರಥೋತ್ಸವ ಏರ್ಪಡಿಸಲಾಗಿತ್ತು. ಮೂರು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಗರದ ಅನೇಕ ಭಕ್ತರು ಭಾಗವಹಿಸಿ ಪುಣ್ಯಭಾಗಿಗಳಾದರು.