Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘದ 24ನೇ ವಾರ್ಷಿಕ ಸರ್ವ ಸದಸ್ಯರ ಸಭೆ

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘದ 2025-26ನೇ ಸಾಲಿನ 24ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಸೆಪ್ಟೆಂಬರ್ 20
, 2026ರ ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಕರೆಯಲಾಗಿದೆ. 

​ಬಸವೇಶ್ವರನಗರದ ಕಮಲಾನಗರದಲ್ಲಿರುವ 'ಕರ್ನಾಟಕ ಇಂಜಿನಿಯರ್ಸ್ ಅಕಾಡಮಿ' (ಸಿ.ಎ. ಸೈಟ್ ನಂ.1, 8ನೇ ಮುಖ್ಯರಸ್ತೆ, 2ನೇ ಕ್ರಾಸ್) ಆವರಣದಲ್ಲಿ ಸಂಘದ ಅಧ್ಯಕ್ಷರಾದ ಎಸ್.ಕೆ. ಲಕ್ಷ್ಮಣ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ. 

Advertisement

​ಸಭೆಯ ಕಾರ್ಯಸೂಚಿಗಳು:
​2025-26ನೇ ಸಾಲಿನ ಆಡಿಟ್ ಮಾಡಿಸಿದ ಲೆಕ್ಕಪತ್ರಗಳು ಹಾಗೂ 2024-25ರ ಆಡಳಿತ ಮಂಡಳಿ ವರದಿಯ ಪರಿಶೀಲನೆ ಮತ್ತು ಅಂಗೀಕಾರ. 
​2026-27ನೇ ಸಾಲಿನ ಅಂದಾಜು ಆಯ-ವ್ಯಯ (ಬಜೆಟ್) ಮಂಜೂರಾತಿ. 
​23ನೇ ಸರ್ವ ಸದಸ್ಯರ ಸಭೆಯ ನಡಾವಳಿಗಳ ಸ್ಥಿರೀಕರಣ ಹಾಗೂ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ. 
​ಸದಸ್ಯರಿಂದ ಬಂದಿರುವ ಪ್ರಸ್ತಾವನೆಗಳು ಹಾಗೂ ಅಧ್ಯಕ್ಷರ ಅನುಮತಿಯೊಂದಿಗೆ ಇತರ ವಿಷಯಗಳ ಚರ್ಚೆ. 

​ವಿಶೇಷ ಸೂಚನೆಗಳು:
​ಸಭೆಗೆ ಕೋರಂ ಇಲ್ಲದಿದ್ದರೆ ಅರ್ಧ ಗಂಟೆ ಮುಂದೂಡಿ ಸಭೆ ನಡೆಸಲಾಗುವುದು.  ​ಚರ್ಚಿಸಬೇಕಾದ ವಿಷಯಗಳಿದ್ದಲ್ಲಿ ಸದಸ್ಯರು ಸಭೆಗೆ 7 ದಿನ ಮುಂಚಿತವಾಗಿ ಲಿಖಿತ ರೂಪದಲ್ಲಿ ಅಧ್ಯಕ್ಷರಿಗೆ ಅಥವಾ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕು. 

​ವಾರ್ಷಿಕ ವರದಿ ಹಾಗೂ ಲೆಕ್ಕಪರಿಶೋಧನಾ ವರದಿಯ ಪ್ರತಿಗಳನ್ನು ಸಭೆಗಿಂತ ಮುಂಚಿತವಾಗಿ ಪಡೆದುಕೊಳ್ಳಬಹುದು. ​ಸಭೆಯ ಬಳಿಕ ಉಪಹಾರದ ವ್ಯವಸ್ಥೆ ಮಾಡಲಾಗಿದೆ. 

​ಸಂಘದ ಕಾರ್ಯಕಲಾಪಗಳು ಸುಸೂತ್ರವಾಗಿ ನಡೆಯಲು ಎಲ್ಲಾ ಸದಸ್ಯ ಬಂಧುಗಳು ತಪ್ಪದೇ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಕಾರ್ಯದರ್ಶಿ ಜಿ.ಹೆಚ್. ನಾಗಹನುಮಯ್ಯ (ಕೆ.ಎ.ಎಸ್) ಕೋರಿದ್ದಾರೆ.  ​(ಸಂಪರ್ಕ ಸಂಖ್ಯೆಗಳು: 9449556844, 8073721238, 7349573825, 9844526677).

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಣೇಶ ಮಂಡಳಿಗಳಿಗೆ ಆರ್ಥಿಕ ನೆರವು ಮತ್ತು ಪಕ್ಷ ಸಂಘಟನೆಯ ಸಂಭ್ರಮ "ಅಮೆರಿಕ ಅಧ್ಯಕ್ಷ ಡೊನಾಲ್ಡ್‌ಟ್ರಂಪ್‌ಕೂಡ ನಮ್ಮ ಗ್ಯಾರಂಟಿ ಕಾಪಿ ಮಾಡುತ್ತಿದ್ದಾರೆ" - ಸಿಎಂ ಡಿ.ಕೆ. ಶಿವಕುಮಾರ್‌ಶಾರ್ಟ್ ಸರ್ಕ್ಯೂಟ್‌ನಿಂದ ಭೀಕರ ಅಗ್ನಿಅವಘಡ; ಒಂದೇ ಕುಟುಂಬದ ನಾಲ್ವರು ಸಜೀವ ದಹನಚಿಕನ್ ಬಿರಿಯಾನಿ ತಿನ್ನುತ್ತಿರುವ ಗಣೇಶನ ಬ್ಯಾನರ್ ಅಳವಡಿಕೆ ವಿವಾದ; ಅಂಗಡಿ ಮಾಲೀಕನ ಬಂಧನಗಣೇಶೋತ್ಸವ ವಿವಾದ ತೀವ್ರ; ಪೊಲೀಸ್ ಠಾಣೆ ಬಳಿಯೇ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ'ವಂದೇ ಮಾತರಂ' ಮೊದಲ ಎರಡು ಚರಣ ಕಡ್ಡಾಯ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆಯುವಶಕ್ತಿಯಲ್ಲಿ ಭಾರತೀಯತೆ ಮತ್ತು ಆಧ್ಯಾತ್ಮಿಕ ಶಕ್ತಿ ಹೆಚ್ಚಿಸಿದ ಮಹಾನ್ ಚೇತನ ತಿಲಕ್ಬದುಕಿನ ದಿಕ್ಕನ್ನೇ ಬದಲಿಸಿದ ಆ ಒಂದು ಸೋಲು…ರಾಜ್ಯ ಮಟ್ಟದ ಪರಿಸರ ಸತ್ಯಾಗ್ರಹ: ಚಿತ್ರದುರ್ಗದಿಂದ 100ಕ್ಕೂ ಹೆಚ್ಚು ಪರಿಸರ ಆಸಕ್ತರು ಭಾಗಿಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘದ 24ನೇ ವಾರ್ಷಿಕ ಸರ್ವ ಸದಸ್ಯರ ಸಭೆ