Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಾ ಲೂಟಿ: ಮುಖ್ಯಮಂತ್ರಿ ವಿರುದ್ಧ ಆರ್‌. ಅಶೋಕ್ ತೀವ್ರ ವಾಗ್ದಾಳಿ 

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
"ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಬಡ ಮಹಿಳೆಯರಿಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ
, ಯೋಜನೆ ಯಶೋಗಾಥೆಯ ಬದಲು ಲೂಟಿ ಮತ್ತು ಅಕ್ರಮದ ಯಶೋಗಾಥೆ ಬರೆಯುತ್ತಿದೆ" ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

​ಸರ್ಕಾರದ ಮೂರು ವರ್ಷಗಳ ಸಂಭ್ರಮವನ್ನು ಖಂಡಿಸಿ ಮಾತನಾಡಿದ ಅವರು, "ಚುನಾವಣೆ ವೇಳೆ ಪ್ರತಿ ತಿಂಗಳು ₹2,000 ಖಾತೆಗೆ ತಲುಪುತ್ತದೆ ಎಂದು ಬೊಗಳೆ ಬಿಟ್ಟಿದ್ದ ಕಾಂಗ್ರೆಸ್ ನಾಯಕರು, ಈಗ ಎರಡು ತಿಂಗಳ ಸುಮಾರು ₹5,000 ಕೋಟಿ ಬಾಕಿ ಹಣ ನೀಡದೆ ಪಂಗನಾಮ ಹಾಕಿದ್ದಾರೆ. ಪತ್ರಿಕಾ ಜಾಹೀರಾತಿಗೆ ಸಾವಿರಾರು ಕೋಟಿ ಸುರಿಯುವ ಸರ್ಕಾರಕ್ಕೆ ಮಹಿಳೆಯರಿಗೆ ನೀಡಲು ಹಣವಿಲ್ಲವೇ?" ಎಂದು ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರು. 

Advertisement

​ಯೋಜನೆಯಲ್ಲಿ ಬಂದಿದೆ ಎನ್ನಲಾದ ಸಾಲು ಸಾಲು ಅಕ್ರಮಗಳನ್ನು ಪಟ್ಟಿ ಮಾಡಿದ ಅವರು.

​CAG ವರದಿ ಅಕ್ರಮ: ಮಹಾಲೇಖಪಾಲರ (ಸಿಎಜಿ) ಪರಿಶೀಲನೆಯಲ್ಲಿ ₹225 ಕೋಟಿಗೂ ಹೆಚ್ಚು ಭಾರಿ ಲೂಟಿ ಪತ್ತೆಯಾಗಿದೆ. 
​ಮೃತರ ಖಾತೆಗೆ ಹಣ:
2.88 ಲಕ್ಷ ಮೃತ ಫಲಾನುಭವಿಗಳ ಹೆಸರಿನಲ್ಲಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯಲಾಗಿದ್ದು, ₹115 ಕೋಟಿ ಸತ್ತವರ ಖಾತೆಗೆ ಜಮೆಯಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ.
​ಬ್ಯಾಂಕ್ ಖಾತೆ ಇಲ್ಲದೆ ಪಾವತಿ: ಖಾತೆ ಸಂಖ್ಯೆಯೇ ಇಲ್ಲದೆ
23,262 ಪಾವತಿಗಳ ಮೂಲಕ ₹46.52 ಕೋಟಿ ಅಕ್ರಮ ಎಸಗಲಾಗಿದೆ.

​ಬೋಗಸ್ ಖಾತೆಗಳು: ಒಂದೇ ಖಾತೆಗೆ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಲಿಂಕ್ ಮಾಡಿ ಅಕ್ರಮ ನಡೆಸಲಾಗಿದೆ.
​ತಕ್ಷಣವೇ
2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ₹5,000 ಕೋಟಿ ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಬೇಕು ಹಾಗೂ ಹೈಕೋರ್ಟ್ ನ್ಯಾಯಾಧೀಶರಿಂದ ಈ ಭಾರಿ ಅಕ್ರಮದ ತನಿಖೆ ನಡೆಸಬೇಕೆಂದು ಆರ್‌. ಅಶೋಕ್ ಆಗ್ರಹಿಸಿದ್ದಾರೆ.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗುಲಾಬಿ ಬೆಳಕಿನಲ್ಲಿ ಮಿಂಚಿದ ಕಲ್ಲಿನ ಕೋಟೆಯ ರಂಗಯ್ಯನ ಬಾಗಿಲುಗೃಹಲಕ್ಷ್ಮಿ ಯೋಜನೆಯ 3ನೇ ವರ್ಷದ ಸಂಭ್ರಮ: ಸಿಎಂ ಡಿ.ಕೆ. ಶಿವಕುಮಾರ್‌ಭೇಟಿಗೆ ಮಹಿಳೆಯರಿಗೆ ಸುವರ್ಣಾವಕಾಶ!ಕಾರ್ಮಿಕರ ಜೊತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿ: ‘ವಿಕಸಿತ ಭಾರತ 2047’ ಸಾಧನೆಗೆ ಶ್ರಮಿಸಲು ಕರೆಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ: ನಾಡಿನಾದ್ಯಂತ ಭಕ್ತಿ ಸಂಭ್ರಮಗೃಹಲಕ್ಷ್ಮಿ ಯೋಜನೆಯಲ್ಲಿ ಮಹಾ ಲೂಟಿ: ಮುಖ್ಯಮಂತ್ರಿ ವಿರುದ್ಧ ಆರ್‌. ಅಶೋಕ್ ತೀವ್ರ ವಾಗ್ದಾಳಿ ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಾ ಲೂಟಿ: ಮುಖ್ಯಮಂತ್ರಿ ವಿರುದ್ಧ ಆರ್‌. ಅಶೋಕ್ ತೀವ್ರ ವಾಗ್ದಾಳಿ ಗೃಹಲಕ್ಷ್ಮಿ ₹5,000 ಕೋಟಿ ರಹಸ್ಯಕ್ಕೆ ‘ಮಂಪರು ಪರೀಕ್ಷೆ’ ಒಂದೇ ದಾರಿ: ಆರ್‌ ಅಶೋಕ್ ನೇರ ಆಗ್ರಹ ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರೂ. ಬಾಕಿ ಬಿಡುಗಡೆ ಮಾಡಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿ.ಟಿ. ರವಿ ವಾಗ್ದಾಳಿಗರುಡ ಪಡೆಗೆ ಮೂಲವೇತನದ %50 ವಿಶೇಷ ಕರ್ತವ್ಯ ಭತ್ಯೆ ಘೋಷಣೆ: ಪ್ರಿಯಾಂಕ್ ಖರ್ಗೆ ಶ್ಲಾಘನೆವಿದೇಶಕ್ಕೆ ಹೋದಾಗ ಆರ್‌ಎಸ್‌ಎಸ್ ಭಾಷೆಯೇ ಬದಲಾಗುತ್ತದೆ: ಪ್ರಿಯಾಂಕ್ ಖರ್ಗೆ ವಾಗ್ದಾಳಿ