Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜನ್ಮದಿನಾಚರಣೆಗಳು ದುಂದು ವೆಚ್ಚದ ತೋರಿಕೆಯ ಆಚರಣೆಗಳಾಗಬಾರದು- ಚಂದ್ರಮೋಹನ್

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜನ್ಮದಿನದ ಆಚರಣೆಗಳು ದುಂದು ವೆಚ್ಚದ ಆಡಂಬರಗಳಂತೆ ಬಿಂಬಿಸುವುದು ಅಷ್ಟು ಸೂಕ್ತವೆನಿಸುವುದಿಲ್ಲ. ವೈಭವದ ಯಾವುದೇ ಆಚರಣೆಗಳು ಸಮಾಜಕ್ಕೆ ಅಷ್ಟು ಸಮಂಜಸವಲ್ಲ ಎಂದು
11ನೇ ವಾರ್ಡ್ ಕರೇನಹಳ್ಳಿ ನಗರಸಭಾ ಸದಸ್ಯ ಚಂದ್ರಮೋಹನ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ಕರೇನಹಳ್ಳಿ ಕಾಳಿದಾಸ ನಗರದ ಯುವ ಮುಖಂಡ ವಿಜಯ್ ಕುಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಬಯಲು ಬಸವಣ್ಣ ದೇವಾಲಯದ ಬಳಿ ಸ್ಪಂದನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ನಡೆದ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ ಚಂದ್ರಮೋಹನ್ ಮಾತನಾಡಿ ಇಂದು ಹುಟ್ಟುಹಬ್ಬದ ಹೆಸರಿನಲ್ಲಿ ಯುವಜನತೆ ಮೋಜು ಮಸ್ತಿಗೋಸ್ಕರ ದುಂದು ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಯಾರೋ ಬೆರಳೆಣಿಕೆಯ ಮಂದಿಗೆ ಮನರಂಜನೆಯಾಗಬಹುದು.

ಆದರೆ ಸಮಾಜಕ್ಕೆ ಇದರಿಂದ ಯಾವುದೇ ಉಪಯೋಗವಿಲ್ಲ. ನಾಲ್ಕಾರು ಜನರಿಗೆ ಉಪಯೋಗವಾಗುವ ಬದಲು ಅದನ್ನೇ ಸಾರ್ವಜನಿಕರ ಬಡವರಿಗೆ ಅನುಕೂಲವಾಗುವ ಯಾವುದಾದರೊಂದು ಕಾರ್ಯಕ್ರಮ ಮಾಡಿದರೆ ಜನ್ಮದಿನದ ಆಚರಣೆಗೆ ಸಾರ್ಥಕ ಭಾವ ಬರುತ್ತದೆ. ಈ ನಿಟ್ಟಿನಲ್ಲಿ ಕಾಳಿದಾಸ ನಗರದ ಯುವ ಮುಖಂಡ ವಿಜಯ್ ಕುಮಾರ್ ಕರೇನಹಳ್ಳಿ ಹಾಗೂ ಸುತ್ತಲಿನ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಉಚಿತ ಅರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಜನಪರ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಯುವ ಜನತೆ ಇಂಥ ತಮ್ಮ ಯಾವುದೇ ಕಾರ್ಯಕ್ರಮ ವನ್ನು ಜನಸಾಮಾನ್ಯರೊಂದಿಗೆ ಬೆರೆತು ಆಚರಿಸುವುದು ತುಂಬಾ ಅರ್ಥಪೂರ್ಣ ಎನಿಸಿಕೊಳ್ಳುವುದರ ಜೊತೆಗೆ ಬಡವರ್ಗದವರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಉಚಿತ ಅರೋಗ್ಯ ಶಿಬಿರದಲ್ಲಿ ಕರೇನಹಳ್ಳಿ ವಿದ್ಯಾನಗರದ ಸಾರ್ವಜನಿಕರು ಭಾಗವಹಿಸಿ ಅರೋಗ್ಯ ತಪಾಸಣೆಯ ಪ್ರಯೋಜನವನ್ನು ಪಡೆದುಕೊಂಡರು. ಅರೋಗ್ಯ ತಪಾಸಣೆಗೆ ಬಂದವರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಡಿಪಿಎ ನಿರ್ದೇಶಕ ರಾಮಣ್ಣ, ಅರಳುಮಲ್ಲಿಗೆ ಗ್ರಾಮ ಪಂಚಾಯ್ತಿ ಸದಸ್ಯ ದ್ರುವಕುಮಾರ್, ನಗರಸಭಾ ಸದಸ್ಯರಾದ ಆನಂದ್, ರೂಪಿಣಿ ಮಂಜುನಾಥ್ ಸೇರಿದಂತೆ ಕರೇನಹಳ್ಳಿ ಭಾಗದ ಹಲವಾರು ಮುಖಂಡರು ಭಾಗವಹಿಸಿ ವಿಜಯ್ ಕುಮಾರ್ ರವರನ್ನು ಅಭಿನಂದಿಸಿದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ ಜಿಲ್ಲೆಯ ವಿಶ್ರಾಂತ ಅಪರ ಜಿಲ್ಲಾಧಿಕಾರಿ ಭಕ್ತರಾಮೇಗೌಡ ಇನ್ನಿಲ್ಲಜನ್ಮದಿನಾಚರಣೆಗಳು ದುಂದು ವೆಚ್ಚದ ತೋರಿಕೆಯ ಆಚರಣೆಗಳಾಗಬಾರದು- ಚಂದ್ರಮೋಹನ್ಇನ್ಸ್ಪೆಕ್ಟರ್ ಕಲ್ಲಪ್ಪ ಎಸ್. ಖರತ್ ರವರಿಗೆ ಡಿಜಿ-ಐಜಿಪಿ ಪದಕಕಂಠಪೂರ್ತಿ ಕುಡಿದು ರಸ್ತೆಯಲ್ಲಿ ದಾವಣಗೆರೆ ಯುವತಿ ಹೈಡ್ರಾಮಾ; ಪ್ರಶ್ನಿಸಿದ ಮಹಿಳಾ ಪಿಎಸ್‌ಐಗೆ ಕಾಲಿನಿಂದ ಒದ್ದು ದರ್ಪ!ಸಚಿವ ಜಾರಕಿಹೊಳಿ ಬಾಮೈದನ ನಿವಾಸದ ಮೇಲೆ ಇಡಿ ದಾಳಿ; 13 ಕೋಟಿ ಆಸ್ತಿ, ನೂರಾರು ಬೇನಾಮಿ ಬಾರ್ ಲೈಸೆನ್ಸ್ ಪತ್ತೆ!ತ್ರಿವಳಿ ಕೊಲೆ: ಹಂತಕಿ ಶ್ವೇತಾ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಪ್ರಿಯಕರ ಕೆನ್ನೆತ್ ಬಂಧನ!ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: 8 ಜನರ ವಿರುದ್ಧ FIR ದಾಖಲಿಸಿದ SITಡಿಕೆಶಿ ಜೊತೆ ಯಾವುದೇ ವ್ಯವಹಾರವಿಲ್ಲ, ಹೊಂದಾಣಿಕೆಯೂ ಇಲ್ಲ; ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ!ಮೆಟ್ರೋ ಬಾಗಿಲು ಲಾಕ್ ಆಗದಿರಲು ತಾಂತ್ರಿಕ ದೋಷವಲ್ಲ, ಪ್ರಯಾಣಿಕರ ಸರ ಕಾರಣ! ಅಸಲಿ ಸತ್ಯ ಬಿಚ್ಚಿಟ್ಟ ಬಿಎಂಆರ್‌ಸಿಎಲ್ನಟಿ ಕೃಷಿ ತಾಪಂಡ ಫ್ಲ್ಯಾಟ್‌ಬೆಡ್‌ರೂಮ್‌ನಲ್ಲಿ ಗೆಳೆಯ ಆತ್ಮಹತ್ಯೆ; ಪೊಲೀಸರ ಮುಂದೆ ನಟಿ ಬಿಚ್ಚಿಟ್ಟ ಸತ್ಯ ಇಲ್ಲಿದೆ!