ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಸಭೆ ಅಧ್ಯಕ್ಷರಾಗಿದ್ದ ಸುಮಿತ್ರಾ ಆನಂದ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಜುಲೈ 18 ರಂದು ಚುನಾವಣೆ ನಡೆಸಲು ದಿನಾಂಕ ನಿಗದಿ ಗೊಳಿಸಿ ದೊಡ್ಡಬಳ್ಳಾಪುರ ಉಪ ವಿಭಾಗಧಿಕಾರಿ ಟಿ. ಆರ್. ಮಂಜುನಾಥ್ ರವರು ಆದೇಶ ಹೊರಡಿಸಿದ್ದಾರೆ.
2021 ಸೆಪ್ಟೆಂಬರ್ ನಲ್ಲಿ ನಡೆದಿದ್ದ ನಗರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಸದಸ್ಯರ ಅದಿಕಾರಾವದಿ ಅಕ್ಟೋಬರ್ 26 ಕ್ಕೆ ಮುಗಿಯಲಿದ್ದು 31 ಜನ ಸದಸ್ಯರನ್ನು ಹೊಂದಿರುವ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಬಿಜೆಪಿ 12 ಕಾಂಗ್ರೆಸ್ 9 ದಳ 7 ಹಾಗೂ ಪಕ್ಷೇತರ ಮೂವರು ಸದಸ್ಯರಿದ್ದಾರೆ.
ಬಿಜೆಪಿ ದಳದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಚುಕ್ಕಾಣಿ ಹಿಡಿದಿದ್ದು ಒಪ್ಪಂದದ ಮೇರೆಗೆ ಮೊದಲ ಅರ್ಧ ಅವಧಿಗೆ ಬಿಜೆಪಿ ಯ ಸುಧಾ ಲಕ್ಷ್ಮೀನಾರಾಯಣ ಹಾಗೂ ಎರಡು ವರ್ಷ ಸುಮಿತ್ರಾ ಆನಂದ್ ಅಧ್ಯಕ್ಷರಾಗಿದ್ದರು. ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಜೆಡಿಎಸ್ ಗೆ ಬಿಟ್ಟು ಕೊಡಲಾಗಿತ್ತು. ಪ್ರಸ್ತುತ ಅವಧಿಯ ಕೊನೆಯ ಮೂರು ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನವನ್ನು ದಳಕ್ಕೆ ಬಿಟ್ಟುಕೊಡುವ ಉದ್ದೇಶದಿಂದ ಬಿಜೆಪಿ ಯ ಸುಮಿತ್ರಾ ಆನಂದ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಆಲ್ಪಾವದಿಗೆ ದಳದ ಅಭ್ಯರ್ಥಿ ನಗರಸಭೆ ಅಧ್ಯಕ್ಷರಾಗುವುದು ಖಚಿತವೆಂದು ಹೇಳಲಾಗುತ್ತಿದೆ.



