ಚಂದ್ರವಳ್ಳಿ ನ್ಯೂಸ್, ಬೆಂಗಳೂರು ಗ್ರಾಮಾಂತರ:
ಸಾಹಿತ್ಯಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ-ತೀಡುವ ಸಾಧನಗಳಾಗಿದ್ದು, ಈ ನಿಟ್ಟಿನಲ್ಲಿ ಜ್ಞಾನದ ಅರಿವು ಕೃತಿಯು ಹಲವು ಮಹನೀಯರ ತತ್ವ ಆದರ್ಶಗಳನ್ನು ಒಳಗೊಂಡಿದ್ದು, ಸಮಾಜದ ಬದಲಾವಣೆಯನ್ನು ತರುವಲ್ಲಿ ಈ ಕೃತಿಯು ಮಹತ್ವದ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಹಾಗಾಗಿ ಡಾ. ಸತ್ಯಮೂರ್ತಿ ಗೂಗಿಯವರು ಆಧುನಿಕ ಸಮಾಜದ ಉನ್ನತ ಚಿಂತಕರಲ್ಲಿ ಒಬ್ಬರು ಎಂದರೆ ತಪ್ಪಾಗುವುದಿಲ್ಲ ಎಂದು ಖ್ಯಾತ ಸಾಹಿತಿ ಹಾಗೂ ಅಂಕಣಕಾರ ಮಣ್ಣೆ ಮೋಹನ್ ಅಭಿಪ್ರಾಯಪಟ್ಟರು.
ತ್ಯಾಮಗೊಂಡ್ಲುವಿನ ಶ್ರೀ ಶೇಷಾವಧೂತ ಮಠದಲ್ಲಿ ಜ್ಞಾನ ಗಂಗಾ ಸಾಹಿತ್ಯರಂಗದ ಸಾಹಿತ್ಯ ಸೌರಭ 8 ರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಹಿತ್ಯಕ್ಕೆ ಜನರನ್ನ ಹಿಡಿದಿಡುವ ಶಕ್ತಿ ಇದೇ ಎನ್ನುವುದಾದರೆ 5,000 ವರ್ಷಗಳ ರಾಮಾಯಣ ಮತ್ತು ಮಹಾಭಾರತ ಸಾಹಿತ್ಯವು ಇಂದಿಗೂ ಚಾಲ್ತಿಯಲ್ಲಿರುವುದೇ ಸಾಕ್ಷಿ ಮತ್ತು ಕನ್ನಡ ನಾಡು ನುಡಿ ಉಳಿಯಬೇಕಾದರೆ ಯುವ ಪೀಳಿಗೆಯು ಹೆಚ್ಚಾಗಿ ಸಾಹಿತ್ಯದೆಡೆಗೆ ಆಕರ್ಷಿತರಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಕಮಲಾಕ್ಷಿ ಕೌಜಲಗಿ, ಸುರೇಶ್ ಕೌಜಲಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಬಿ. ಎನ್ ಕೃಷ್ಣಪ್ಪ, ಪ್ರೊ. ಬೊಗಣ್ಣ, ಸಾಹಿತಿ ಮಣ್ಣೆ ಮೋಹನ್, ಉಮೇಶ್ ಯಲಚವಾಡಿ, ಕೃತಿ ರಚನೆಕಾರ ಡಾ. ಸತ್ಯಮೂರ್ತಿ ಗೂಗಿ, ಪರಿಸರವಾದಿ ಸುರೇಶ್ ಕೌಜಲಗಿ, ರತ್ನ ತುಮಕೂರು, ಗೀತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
“ಸಾಹಿತ್ಯಕ್ಕೆ ಜನರನ್ನ ಹಿಡಿದಿಡುವ ಶಕ್ತಿ ಇದೇ ಎನ್ನುವುದಾದರೆ 5,000 ವರ್ಷಗಳ ರಾಮಾಯಣ ಮತ್ತು ಮಹಾಭಾರತ ಸಾಹಿತ್ಯವು ಇಂದಿಗೂ ಚಾಲ್ತಿಯಲ್ಲಿರುವುದೇ ಸಾಕ್ಷಿ ಹಾಗೆ ಕನ್ನಡ ನಾಡು ನುಡಿ ಉಳಿಯಬೇಕಾದರೆ ಯುವ ಪೀಳಿಗೆಯು ಹೆಚ್ಚಾಗಿ ಸಾಹಿತ್ಯದೆಡೆಗೆ ಆಕರ್ಷಿತರಾಗಬೇಕಿದೆ”.
ಮಣ್ಣೆ ಮೋಹನ್, ಖ್ಯಾತ ಸಾಹಿತಿ ಹಾಗೂ ಅಂಕಣಕಾರರು.



