i
ಚಿತ್ರದುರ್ಗ
ಚಿಕ್ಕಮಗಳೂರು ಜಿಲ್ಲೆಯ 13 ವಿದ್ಯಾರ್ಥಿಗಳು ಚಿತ್ರದುರ್ಗದಲ್ಲಿ ಲಾಕ್ ಆಗಿದ್ದು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಶುಕ್ರವಾರ ಬೆಳಗ್ಗೆ 5:45 ರಿಂದ ರಸ್ತೆ ಬದಿಯಲ್ಲೇ ವಿದ್ಯಾರ್ಥಿಗಳು ಕುಳಿತಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳು ಮಹಾರಾಷ್ಟ್ರದ ಲಾತೂರ್ ನಲ್ಲಿ ಆರು ತಿಂಗಳ ಕೃಷಿ ತರಬೇತಿಗೆ ತೆರಳಿದ್ದರು.
ಲಾಕ್ ಡೌನ್ ವೇಳೆ ಮಹಾರಾಷ್ಟ್ರದಿಂದ ಹೊರಟು ವಿಜಯಪುರದಲ್ಲಿ ಲಾಕ್ ಆಗಿದ್ದು 30 ದಿನಗಳ ಕ್ವಾರೆಂಟೈನ್ ಮುಗಿಸಿ ಬಂದಿರುವ ವಿದ್ಯಾರ್ಥಿಗಳು ಬಂದಿದ್ದಾರೆ.
10 ವಿದ್ಯಾರ್ಥಿನಿಯರು ಹಾಗೂ 03 ವಿದ್ಯಾರ್ಥಿಗಳು
ಟೆಂಪೋ ಟ್ರಾವಲರ್ ಮೂಲಕ ಚಿತ್ರದುರ್ಗಕ್ಕೆ ಬಂದು
ಮುಂದೆ ಚಿಕ್ಕಮಗಳೂರಿಗೆ ಹೋಗಲು ವಾಹನ ಸಿಗದೆ ವಿದ್ಯಾರ್ಥಿಗಳ ಕಂಗಾಲಾಗಿದ್ದಾರೆ.
ಡಿಸಿಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಲಾಗಿದೆ.