i
ತುಮಕೂರು
ತುಮಕೂರು ಜಿಲ್ಲೆಯ ದಲಿತ ಭೂಮಿ ಹಕ್ಕು ಹೋರಾಟ ಸಮಿತಿಯ ವತಿಯಿಂದ ಇಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಅನಾದಿಕಾಲದಿಂದಲೂ ದಲಿತರ ಭೂಮಿಯ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದನ್ನು ಮನಗಂಡ ತುಮಕೂರು ಜಿಲ್ಲೆಯ ಕೋತಿ ತೋಪಿನ ನಿವಾಸಿಗಳಾದ ವಿದ್ಯಾವಂತ ಯುವಕರು ದಲಿತ ಭೂಮಿ ಹಕ್ಕು ಹೋರಾಟ ಸಮಿತಿ ರಚಿಸಿ ಇದರ ಮೂಲಕ ಶೋಷಣೆಗೊಳಗಾದ ದಲಿತರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಸಮಿತಿಯ ಸದಸ್ಯರಾದ ಮೋಹನ್ ಕುಮಾರ್, ಜೆಸಿಬಿ ನಾಗರಾಜ್, ಯೋಗೇಶ್, ಶಶಿ, ನಟರಾಜು, ರಾಮಯ್ಯ, ಕೆಂಪರಾಜು, ಹರೀಶ್, ರಮೇಶ್, ಕಿರಣ್, ಪ್ರಕಾಶ್ ಮತ್ತಿತರರು ಹಾಜರಿದ್ದರು.