i
ಚಿತ್ರದುರ್ಗ
ವಿಧಾನಪರಿಷತ್ ಸದಸ್ಯರಾದ ರಘು ಆಚಾರ್ ರವರು ಚಿತ್ರದುರ್ಗ ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ ಕಿಟ್) ಧರಿಸಿ ಭೇಟಿ ನೀಡಿ ಸುಮಾರು 25 ನಿಮಿಷಗಳ ಕಾಲ ರೋಗಿಗಳ ಕುಂದುಕೊರತೆಗಳನ್ನು ತಿಳಿದುಕೊಂಡರು.
ಕೋವಿಡ್ ಆಸ್ಪತ್ರೆಯ ಎಲ್ಲಾ ವಾರ್ಡ್ ಗಳಿಗೆ ಭೇಟಿ ನೀಡಿ ರೋಗಿಗಳ ಸೌಲಭ್ಯಗಳನ್ನು ಪರಿಶೀಲನೆ ನಡೆಸಿ, ಯಾವುದೇ ಕುಂದುಕೊರತೆ ಬಂದರೆ ನನಗೆ ಅಹವಾಲು ನೀಡಿ ಎಂದು ತಮ್ಮ ಮೊಬೈಲ್ ಸಂಖ್ಯೆ ನೀಡಿದರು.
ಶೌಚಾಲಯದ ಬಳಿ ಇದ್ದ ತ್ಯಾಜ್ಯ ವಸ್ತುಗಳನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿ ಸಂಬಂಧ ಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ, ಹಾಗೂ ವೈದ್ಯರು ಪ್ರತಿದಿನ ವಾರ್ಡ ಗೆ ಭೇಟಿ ನೀಡುತ್ತಿಲ್ಲ ಮತ್ತು ಸಾಮಾನ್ಯ ಹಾಗೂ ನಿತ್ಯ ಪರೀಕ್ಷೆಗಳಾದ ರಕ್ತದೊತ್ತಡ, ಮಧುಮೇಹ ನಡೆಸುತ್ತಿಲ್ಲ ಎಂದು ರೋಗಿಗಳು ದೂರು ನೀಡಿದರು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್ ಇದ್ದರು.