i
ದುಮ್ಮಿ ಗೊಲ್ಲರಹಟ್ಟಿಯ ಶ್ರೀಜುಂಜಪ್ಪಸ್ವಾಮಿಯ ಜಾತ್ರೆಯನ್ನು ಮುಂದೂಡಲಾಗಿದೆ…
ಚಿತ್ರದುರ್ಗ:
ಡಿ.೨೯ ರಿಂದ ೩೧ ರವರೆಗೆ ಮೂರು ದಿನಗಳ ಕಾಲ ನಡೆಯಬೇಕಿದ್ದ ಹೊಳಲ್ಕೆರೆ ತಾಲ್ಲೂಕು ದುಮ್ಮಿಗೊಲ್ಲರಹಟ್ಟಿಯ ಶ್ರೀಜುಂಜಪ್ಪಸ್ವಾಮಿಯ ಜಾತ್ರೆಯನ್ನು ಮುಂದೂಡಲಾಗಿದೆ.
ಡಿ.೩೦ ರಂದು ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆಯಿರುವುದರಿಂದ ನೀತಿ ಸಂಹಿತೆ ಪಾಲನೆಗಾಗಿ ಮುಂದೂಡಲಾಗಿದ್ದ ಜಾತ್ರೆಯನ್ನು ಜ.೪ ರಿಂದ ೬ ರವರೆಗೆ ನಡೆಸಲಾಗುವುದು. ಕೊರೋನಾ ಹಾವಳಿಯಿರುವುದರಿಂದ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಬಳಸಿ ಸ್ವಾಮಿಯ ದರ್ಶನ ಪಡೆಯುವಂತೆ ರಾಷ್ಟೀಯ ಯುವ ಪ್ರಶಸ್ತಿ ಪುರಸ್ಕೃತ ಎ.ಚಿತ್ತಪ್ಪ ಯಾದವ್, ಅಂಗಡಿ ಕೆ.ತಿಮ್ಮಪ್ಪ, ಗೌಡರ ಕುಬೇಂದ್ರಪ್ಪ, ರವಿ ಸುದ್ದೇರ್, ರೇವಣ್ಣ, ಗುರುಸಿದ್ದಪ್ಪ, ನಾಗಪ್ಪ ಮತ್ತಿತರರು ಮನವಿ ಮಾಡಿದ್ದಾರೆ.