i
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಿ ಜೈಲು ಸೇರಿರುವ ಘಟನೆ ಬೆಂಗಳೂರಿನಲ್ಲಿ ಜರುಗಿದೆ.
ಪತ್ನಿ ಮತ್ತು ಅವಳ ಲವರ್ ನಿಂದ ಕೊಲೆಯಾದ ಮೃತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಪತ್ನಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಆಂದ್ರ ಮೂಲದ ಸುರೇಶ್ನನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಯಲಹಂಕದ ಕೊಂಡಪ್ಪಲೇಔಟ್ ನಿವಾಸಿ ಶಿವಪ್ಪ ಎಂಬುವರು ಕಳೆದ ಅಕ್ಟೋಬರ್.21ರಂದು ತನ್ನ ಅಳಿಯ ಚಂದ್ರಶೇಖರ್ನನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತನಿಖೆ ನಡೆಸಿದ ಪೋಲಿಸರು, ಕೊಲೆಯಾದ ಚಂದ್ರಶೇಖರ್ ಪತ್ನಿ ಶ್ವೇತಾಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯ ಬಯಲಾಗಿದೆ.
ಆರೋಪಿ ಶ್ವೇತಾ ಮತ್ತು ಸುರೇಶ್ ಮೊದಲಿಂದಲೂ ಪ್ರೀತಿಸುತ್ತಿದ್ದು ಮದುವೆಗೆ ಮುಂಚೆಯೇ ಇಬ್ಬರು ಸ್ನೇಹಿತರಾಗಿದ್ದರು. ಆದರೆ ಕುಟುಂಬದವರು ಶ್ವೇತಾಗೆ ಇಷ್ಟ ಇಲ್ಲದಿದ್ದರೂ ಬಲವಂತವಾಗಿ ಮದುವೆ ಮಾಡಿದ್ದರು ಎನ್ನಲಾಗಿದೆ.
ಮದುವೆ ನಂತರವೂ ಪ್ರೇಮಿಗಳಿಬ್ಬರ ಮಧ್ಯ ಪ್ರೀತಿ ಪ್ರೇಮ ಇತ್ಯಾದಿ ನಡೆದಿತ್ತು ಎನ್ನಲಾಗಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.