i
ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖ್ಯಾತ ನಟ ಡಾ.ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಹಲವು ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.
ವಿಧಾನಸಭೆಯ ಮುಂಭಾಗದಲ್ಲಿ ನಡೆದ ಯಶಸ್ವಿ ಕಾರ್ಯಕ್ರಮಕ್ಕೆ ಹಲವು ವಿಶೇಷತೆಗಳು ಸಾಕ್ಷಿಯಾಯಿತು.
ಕನ್ನಡಿಗ ಹಾಗೂ ಖ್ಯಾತ ತಮಿಳು ನಟರಾದ ರಜಿನಿಕಾಂತ್, ಜೂ.ಎನ್ ಟಿ ರಾಮರಾವ್, ಸುಧಾಮೂರ್ತಿ ಸೇರಿದಂತೆ ಹಲವು ನಾಯಕ ನಟರು, ರಾಜಕುಮಾರ್ ಕುಟುಂಬದ ಸದಸ್ಯರು, ಸಚಿವರುಗಳು ಅವರು ಪ್ರಮುಖ ಭಾಗವಹಿಸಿದ್ದು, ಮಳೆ ಬಂದ ಕಾರಣ ಕಾರ್ಯಕ್ರಮ ಯೋಜನೆಯಂತೆ ನಡೆಯದಿದ್ದರೂ, ಪೂರ್ಣವಾಗಿ ನಡೆಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುಧಾ ಮೂರ್ತಿ ಸೇರಿದಂತೆ ಗಣ್ಯರು ಅಪ್ಪು ಪರವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.