i
ಪೊಲೀಸ್ ಅಧಿಕಾರಿಗಳ ಹೊಟ್ಟೆ ಮೇಲೆ ಕಣ್ಣು ಹಾಕಿದ ಎಡಿಜಿಪಿ ಅಲೋಕ್ ಕುಮಾರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು ಚಿತ್ರದುರ್ಗ ಭೇಟಿ ಸಂದರ್ಭದಲ್ಲಿ ಡಿವೈಎಸ್ಪಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಸಾಲಾಗಿ ನಿಂತಿದ್ದು ಆ ಎಲ್ಲ ಅಧಿಕಾರಿಗಳನ್ನ ವೈಯಕ್ತಿಕವಾಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರಲ್ಲದೆ ಹಾಗೇ ಪೊಲೀಸ್ ಅಧಿಕಾರಿಗಳ ಉಬ್ಬಿರುವ ಹೊಟ್ಟೆ ನೋಡಿ ಏನಿದು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರು ಹೊಟ್ಟೆ ಬೆಳೆಸಿಕೊಳ್ಳಬಾರದು, ಮೊದಲು ಹೊಟ್ಟೆ ಕರಿಸಿ ಫಿಟ್ ಆಗಿರಬೇಕು ಎಂದು ಚಿತ್ರದುರ್ಗ ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದ ಪ್ರಸಂಗ ಜರುಗಿದೆ.
ಚಿತ್ರದುರ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಹಳ ಹೊಟ್ಟೆ ಇರುವಂತ ಪೊಲೀಸ್ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿ ಹೆಚ್ಚಿನ ಹೊಟ್ಟೆ ಬೆಳೆಸಿಕೊಂಡಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಫಿಟ್ ಆಗಿರಬೇಕು, ನೌಕರಿಗೆ ಸೇರುವಾಗ ಎಲ್ಲರೂ ಹಾಗೇ ಇರುತ್ತಾರೆ ಆದರೆ ಸರ್ವಿಸ್ ಆದಂತೆ ಹೊಟ್ಟೆ ಬೆಳೆಸಿಕೊಳ್ಳುತ್ತಾರೆ, ಬೇಗ ಹೊಟ್ಟೆ ಕರಗಿಸಿಕೊಳ್ಳಿ ಎಂದು ಸ್ವರಸ್ಯಕರವಾಗಿ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯೂರು ಡಿವೈ ಎಸ್ ಪಿ ರೋಷನ್ ಜಮೀರ್, ಚಿತ್ರದುರ್ಗ ಡಿವೈ ಎಸ್ ಪಿ ಅನಿಲ್, ಚಳ್ಳಕೆರೆ ಡಿವೈ ಎಸ್ ಪಿ ರಮೇಶ್, ಡಿಸಿಆರ್ ಡಿ ವೈ ಎಸ್ ಪಿ ಲೋಕೇಶ್ ಮತ್ತು ಎಸ್ ಪಿ ಕಚೇರಿಯ ಸಿಪಿಐ ನಾಗರಾಜ್ ಅವರುಗಳ ಹೊಟ್ಟೆ ನೋಡಿ ಹೆವಿ ವೈಟ್ ಆಗಿದ್ದೀರಿ, ನಿಮ್ಮ ಎಸ್ ಪಿಯವರನ್ನು ನೋಡಿ ಅವರು ಎಷ್ಟು ಲೈಟಾಗಿದ್ದಾರೆ ಎಂದು ಎಸ್ಪಿ ಅವರನ್ನ ತೋರಿಸಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.