i
ಕಾಂಗ್ರೆಸ್ ಬಿಜೆಪಿ ಮುಖಂಡರು ಮತ್ತು ವಿವಿಧ ಸಮುದಾಯಗಳ ಮುಖಂಡರ ಜೆಡಿಎಸ್ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ಗುರುಮಠಕಲ್:
ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬಿಜೆಪಿ ಸೇರಿದಂತೆ ವಿವಿಧ ಜಾತಿ ಸಮುದಾಯಗಳ ಮುಖಂಡರು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಗುರುಮಠಕಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಜೆಡಿಎಸ್ ಸೇರ್ಪಡೆಗೊಂಡವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.
ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ ಕಳೆದ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ನೀಡಿ ನಮ್ಮ ತಂದೆಯವರನ್ನು ಆಶೀರ್ವದಿಸಿ ಗೆಲ್ಲಿಸಿದ್ದೀರಿ. ಮತದಾರರ ಭಾವನೆ ಮತ್ತು ನಂಬಿಕೆಗೆ ಯಾವುದೇ ಭಂಗ ತರಾದೆ ಪ್ರಮಾಣಿಕವಾಗಿ ಮತದಾರರ ಋಣ ತೀರಿಸಲು ದುಡಿಯುತ್ತಿದ್ದೇವೆ ಮತ್ತು ಮುಂದೆಯೂ ಕ್ಷೇತ್ರದ ಜನತೆ ಸೇವೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಜೆಡಿಎಸ್ ಪಕ್ಷ ಮತ್ತು ನಾವು ನೀಡಿದ ಭರವಸೆಗಳ ಈಡೇರಿಕೆಗೆ ಇಂದಿಗೂ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ರಾಜಕೀಯ ವಿರೋಧಿಗಳ ಮಾತಿಗೆ ಕಿವಿಗೊಡುವುದು ಬೇಡ, ನಾವು ಮಾಡುವ ಕೆಲಸದಿಂದ ಉತ್ತರಿಸೋಣ. ಕ್ಷೇತ್ರದ ಜನತೆಯೇ ನಮ್ಮ ಕುಟುಂಬ ಗಳಿಸಿರುವ ಬಹುದೊಡ್ಡ ಆಸ್ತಿ ಎಂದು ಭಾವುಕರಾದರು.
ಚುನಾವಣೆಗಳ ಸಮಯದಲ್ಲಿ ಮಾತ್ರ ರಾಜಕೀಯ ಮಾಡುವುದು ನಮಗೆ ಗೊತ್ತು, ಚುನಾವಣೆಯ ನಂತರದಲ್ಲಿ ಎಲ್ಲರೂ ಒಗ್ಗೂಡಿ ಜನತೆಯ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು. ನಿಮ್ಮಗಳ ಆಶಯದಂತೆ ನಮ್ಮ ಅವಧಿಯಲ್ಲಿ ಎಲ್ಲಾ ಗ್ರಾಮಗಳಿಗೂ ಸಮಾನ ಆದ್ಯತೆ ನೀಡಿದ್ದೇವೆ. ಉಳಿದ ಕೆಲಸಗಳನ್ನೂ ಪೂರ್ಣಗೊಳಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಯಲ್ಲಪ್ಪ ಯಾದವ ಹಾಗೂ ನರಸಪ್ಪ ಧನವಾಡ ನೇತೃತ್ವದಲ್ಲಿ ದೇವರಹಳ್ಳಿಯ ರಾಮುಲು ಯಾದವ, ಮಲ್ಲಿಕಾರ್ಜುನ, ಚಿಂತಕುಂಟಾ ಗ್ರಾಮದ ಆಶಪ್ಪ ಯಾದವ, ಮಹಾದೇವಪ್ಪ, ಮೋಟನಹಳ್ಳಿಯ ಯಲ್ಲಪ್ಪ ಯಾದವ, ದಾಸಪ್ಪ, ಶರಣಪ್ಪ, ಹೊಸಳ್ಳಿಯ ಅಯ್ಯಪ್ಪ ಯಾದವ್, ಭೀಮಯ್ಯ, ಸಂಜಪ್ಪ, ಗುರುಮಠಕಲ್ ಪಟ್ಟಣದ ಯಲ್ಲಪ್ಪ ಯಾದವ, ನರಸಪ್ಪ ಯಾದವ, ಯಂಕಟಪ್ಪ ಇಟಕಾಲ, ಯಂಕಟಪ್ಪ ಗಾಡ್ದುಲ, ಮಾಶಪ್ಪ ನಿರೇಟಿ ಸೇರಿದಂತೆ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.
ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ ನಿರೇಟಿ, ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಬಸಣ್ಣ ದೇವರಳ್ಳಿ, ರಘುನಾಥರೆಡ್ಡಿ ಗವಿನೋಳ, ಭೀಮಶಪ್ಪ ಗುಡಿಸೆ, ಬಾಲು ದಾಸರಿ, ಸಿರಾಜ ಚಿಂತಕುಂಟಿ, ನರಸಪ್ಪ ಕವಡೆ, ಭಾನುಪ್ರಕಾಶ ಮೇದಾ, ಅನಂತಪ್ಪ ಯದ್ಲಾಪುರ, ದೀಪಕ ಬೆಳ್ಳಿ, ಅನಂತಪ್ಪ ಮುಕುಡಿ ಇದ್ದರು.