i
ನ.9ಕ್ಕೆ ನೀರಾವರಿ ಹೋರಾಟಗಾರ ಎಂ.ಜಯಣ್ಣ ಅವರ ಪುಣ್ಯಸ್ಮರಣೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೀರಾವರಿ ಹೋರಾಟಗಾರ ಎಂ. ಜಯಣ್ಣ, ದಲಿತರಿಗೆ ಧ್ವನಿಯಾಗಿ, ಪೌರಕಾರ್ಮಿಕರ ಬಾಳಿನ ಬೆಳಕಾಗಿ, ಸಮಾಜ ಕಲ್ಯಾಣ ಇಲಾಖೆ ಅಡುಗೆ ನೌಕರರಿಗೆ ಆಸರೆಯಾಗಿ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಮುಂಚೂಣಿ ನಾಯಕತ್ವ ನೀಡಿದ ಹೋರಾಟಗಾರ, ದಲಿತ ನಾಯಕ ಕರ್ನಾಟಕ ರಾಜ್ಯ ಡಾ.ಬಾಬು ಜಗಜೀವನರಾಂ ಪ್ರಶಸ್ತಿ ಪುರಸ್ಕೃತ ಎಂ.ಜಯಣ್ಣ ಅವರ ಪುಣ್ಯಸ್ಮರಣೆ ಹಾಗೂ ನುಡಿ ನಮನ ಕಾರ್ಯಕ್ರಮವನ್ನು ನ.9ರಂದು ಬೆಳಗ್ಗೆ 10.30ಕ್ಕೆ ತಮ್ಮ ಜೀವಮಾನವಿಡೀ ಹೋರಾಟದ ಕೇಂದ್ರ ಬಿಂದು ಮಾಡಿಕೊಂಡಿದ್ದ ನಗರದ ಒನಕೆ ಓಬವ್ವ ವೃತ್ತ (ಜಿಲ್ಲಾಧಿಕಾರಿವೃತ್ತ) ದಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದು, ಪ್ರಯುಕ್ತ ಜಿಲ್ಲೆಯ ಎಲ್ಲಾ ಎಂ.ಜಯಣ್ಣ ಅಭಿಮಾನಿಗಳು, ಚಿಂತಕರು, ಸಾಹಿತಿಗಳು, ರೈತ ಹೋರಾಟಗಾರರು, ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಬಿ.ಪಿ ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.