i
ಅಪ್ಪು ನಮನ, ಕರ್ನಾಟಕ ರತ್ನ ಅಪ್ಪು ಎಂದೆಂದಿಗೂ ಅಮರ-ಶಾಸಕ ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರತ್ನ ಪುನೀತ್ ರಾಜ್(ಅಪ್ಪು) ಮಾಡಿರುವ ಶಾಶ್ವತ ಕಾರ್ಯಗಳಿಂದಾಗಿ ಭೂಮಿ ಚಂದ್ರ ಇರುವವರೆಗೂ ಅಮರರಾಗಿರುತ್ತಾರೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಚಿತ್ರದುರ್ಗ ನಗರದ ಕನಕ ಸರ್ಕಲ್ ನಲ್ಲಿ ಡಿಎಂ ಗ್ರೂಪ್ ನ, 13ನೇ ವಾರ್ಡ್ ನೆಹರು ನಗರದ ಗೋಪಿ ಮತ್ತು ಸ್ನೇಹಿತರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅದ್ಧೂರಿ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ರತ್ನ ಅಪ್ಪು ನಮನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಸನ್ಮಾನ ಸ್ಪೀಕರಿಸಿ ಅವರು ಮಾತನಾಡಿದರು.
ಅತಿ ಚಿಕ್ಕ ವಯಸ್ಸಿನಲ್ಲೇ ಎಲೆಮರೆಕಾಯಿಂತೆ ಉತ್ತಮ ಕೆಲಸ ಮಾಡಿದ್ದಾರೆ. ಅಪ್ಪು ದಾನ ಧರ್ಮ ಮಾಡುವವರಿಗೆ ಸದಾ ಮಾದರಿಯಾಗಿರುತ್ತಾರೆಂದು ಶಾಸಕರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ನಗರಸಭಾ ಅಧ್ಯಕ್ಷ, ಹಾಲಿ ಸದಸ್ಯ ಡಿ.ಮಲ್ಲಿಕಾರ್ಜುನ್ ಮಾತನಾಡಿ ಕನ್ನಡ ನಾಡು ನುಡಿಗೆ ಸದಾ ಬೆಂಬಲವಾಗಿರುತ್ತೇವೆ. ಅದೇ ರೀತಿ ಅಪ್ಪು ಅವರ ಸಾಮಾಜಿಕ ಕಾರ್ಯಗಳು ಎಂದೆಂದಿಗೂ ಶಾಶ್ವತವಾಗಿರುತ್ತವೆ ಎಂದು ತಿಳಿಸಿದರು.
ಡಿ ಎಂ ಗ್ರೂಪ್ ಬಳಗದ ಸದಸ್ಯರು, ಅಭಿಮಾನಿಗಳು ಹಾಗೂ ವಾರ್ಡಿನ ಮುಖಂಡರುಗಳು ಹಾಜರಿದ್ದರು.