i
ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವಂತೆ ಭಾರೀ ಒತ್ತಡ ಇದೆ ಎಂದ ಈಶ್ವರಗೆರೆ ಷಡಕ್ಷರಪ್ಪ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
2023ರ ವಿಧಾನಸಭಾ ಚುನಾವಣೆಗೆ ಮುನ್ನ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳು ನಡೆಯುವ ಸಾಧ್ಯತೆ ಇದ್ದು ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದೆ. ಈ ಎರಡು ಎಸ್ಸಿ ಮೀಸಲು ಕ್ಷೇತ್ರದ ಯಾವುದಾದರೊಂದು ಜಿಪಂ ಕ್ಷೇತ್ರದಲ್ಲಿ ತಾವು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಈಶ್ವರಗೆರೆ ಮಸಿಯಪ್ಪನವರ ಪುತ್ರ ಎಂ.ಷಡಕ್ಷರಪ್ಪ ಚಂದ್ರವಳ್ಳಿ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.
ಇಡೀ ವಿಧಾನಸಭಾ ಕ್ಷೇತ್ರದಲ್ಲಿ ತಾನು ಯಾರೆಂದು ಎಲ್ಲ ಮತದಾರರಿಗೂ ಗೊತ್ತಿದೆ. ಸಾಕಷ್ಟು ಸಮಾಜ ಸೇವೆ ಮಾಡುತ್ತಿದ್ದೇನು. ಮೂರು ರಾಜಕೀಯ ಪಕ್ಷಗಳಿಂದಲೂ ಟಿಕೆಟ್ ನೀಡುವುದಾಗಿ ವರಿಷ್ಠರು ಹೇಳುತ್ತಿದ್ದಾರೆ. ನಾನು ಖಂಡಿತ ಒಂದು ರಾಜಕೀಯ ಪಕ್ಷದಿಂದ ಸ್ಪರ್ಧಿಸಿ ಗೆದ್ದೇ ಗೆಲ್ಲುತ್ತೇನೆ. ನನ್ನ ಸೇವೆ ಪಡೆದಿರುವಂತಹ ಮತದಾರರು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಒಂದು ವೇಳೆ ಜಿಪಂ, ತಾಪಂ ಚುನಾವಣೆಗಳು ಮುಂದೂಡಲ್ಪಟ್ಟರೆ ವಿಧಾನಸಭಾ ಚುನಾವಣೆ ನಂತರೆ ನಡೆದರೆ ಇನ್ನೂ ಒಳ್ಳೆಯದು. ನನಗೆ ಸಮಾಜ ಸೇವೆ ಮಾಡಲು ಮತ್ತಷ್ಟು ಅವಕಾಶ ಸಿಕ್ಕಂತಾಗುತ್ತದೆ ಎಂದು ಷಡಕ್ಷರಪ್ಪ ತಿಳಿಸಿದ್ದಾರೆ.