i
ರಾಜಕೀಯ ನಾಯಕರ ಪಿಕ್ ಪಾಕೇಟ್ ಕಳ್ಳನ ಬಂಧನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜಕೀಯ ಸಭೆ, ಸಮಾರಂಭ, ಸಮಾವೇಶಗಳಲ್ಲಿ ರಾಜಕಾರಣಿಯಂತೆ ವರ್ತಿಸಿ ರಾಜಕೀಯ ನಾಯಕರು ಮತ್ತು ಮುಖಂಡರ ಜೇಬಿಗೆ ಕೈ ಹಾಕಿ ಪಿಕ್ ಪಾಕೇಟ್ ಮಾಡುತ್ತಿದ್ದ ಕಳ್ಳನನ್ನ ಕೊನೆಗೂ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಚಿತ್ರದುರ್ಗದಲ್ಲಿ ಜರುಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಗಲ್ಲಿ ರಾಜಕಾರಣಿಗಳ ಜೇಬಿಗೆ ಕೈ ಹಾಕಿ ಪಿಕ್ ಪಾಕೆಟ್ ಮಾಡಲು ಯತ್ನಿಸಿ ಸಿಕ್ಕಿ ಬಿದ್ದ ಕಳ್ಳನನ್ನು ಪೊಲೀಸರು ಜೈಲಿಗೆ ಸೇರಿಸಿದ್ದಾರೆ.