i
ಮುರುಘಾ ಶರಣರ ಬಿಡಲು 3 ಕೋಟಿ ರೂ. ಕುರಿತ ಹೇಳಿಕೆಗೆ ಒಡನಾಡಿ ಸಂಸ್ಥೆಗೆ ನೋಟೀಸ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೋ ಪ್ರಕರಣದಡಿ ಕಾರಾಗೃಹದಲ್ಲಿರುವ ಶಿವಮೂರ್ತಿ ಮುರುಘಾ ಶರಣರನ್ನು ಬಿಡಲು 3 ಕೋಟಿ ಆಮಿಷ ಒಡ್ಡಲಾಗಿತ್ತು ಎನ್ನುವ ಒಡನಾಡಿ ಸಂಸ್ಥೆಯ ನಿರ್ದೇಶಕ ಎಂ.ಎಲ್.ಪರಶು ಅವರಿಗೆ ಚಿತ್ರದುರ್ಗ ಪೊಲೀಸರು ನೋಟಿಸ್ ನೀಡಿ ಸೂಕ್ತ ಮಾಹಿತಿ ನೀಡುವಂತೆ ಕೋರಿಕೊಂಡಿದ್ದಾರೆ.
ತನಿಖಾಧಿಕಾರಿ ಡಿವೈಎಸ್ಪಿ ಲೋಕೇಶ್ ನೋಟಿಸ್ ಜಾರಿ ಮಾಡಿ ನ.29ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಮೇಲ್ ಮೂಲಕ ನೋಟಿಸ್ ತಲುಪಿರುವುದನ್ನು ಒಡನಾಡಿ ಸಂಸ್ಥೆ ಖಚಿತಪಡಿಸಿದೆ. ಅಲ್ಲದೆ 3 ಕೋಟಿ ಆಮಿಷ ಒಡ್ಡಿರುವ ವಿಷಯದಲ್ಲಿ ಸಚಿವರೊಬ್ಬರ ಹೆಸರು ತಳುಕು ಹಾಕಿಕೊಂಡಿದ್ದರಿಂದ ಈ ಹೇಳಿಕೆಗೆ ಮಹತ್ವ ಬಂದಿದ್ದು ಹಾಗಾಗಿ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.