i
ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಡಿ.16 ರಿಂದ 21ರ ತನಕ ವಿಶೇಷ ಪೂಜೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೇದಹಳ್ಳಿ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 23ನೇ ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮ ಡಿಸೆಂಬರ್ 16 ರಿಂದ 21ರವರೆಗೆ ಪೂಜಾ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ. ಈ ಬ್ರಹ್ಮೋತ್ಸವ ಪೂಜೆಯನ್ನು ಕೇರಳದ ವಿಷ್ಣು ಭಟ್ಟಾದ್ರಿ ಪಾಡ್ ತಂತ್ರಿಗಳು ತ್ರಿಶೂರ್ ಕೇರಳ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಸತೀಶ್ ಶರ್ಮರವರು ನೇತೃತ್ವದಲ್ಲಿ ನೆರವೇರಿಲಿದೆ. ಪೂಜಾ ಕಾರ್ಯಕ್ರಮ ಬೆಳಿಗ್ಗೆ ಮಹಾಗಣಪತಿ ಹೋಮ ಸುದರ್ಶನ ಹೋಮ ಅಭಿಷೇಕ ಉಷಾ ಪೂಜೆ, ನವಕಂ ಪಂಚಕವ್ಯಂ ಕಳಸ ಪೂಜೆ ಹುಚ್ಚ ಪೂಜೆ ಹಾಗೂ ಸಂಜೆಯ ಸಮಯದಲ್ಲಿ ಅಂಕುರ ಪೂಜೆ ಮೊಳಪೂಜೆ, ದೀಪಾರಾಧನೆ ಶ್ರೀ ಭೂತ ಬಲಿ ಭಗವತ್ ಸೇವಾ ಅತ್ತಲ್ ಪೂಜೆ ಅಯ್ಯಪ್ಪ ಸ್ವಾಮಿಗೆ ನೆರವೇರಿಸಲಾಗುತ್ತದೆ.
ಡಿಸೆಂಬರ್-16ರ ಸಂಜೆ ದೇವಸ್ಥಾನದ ಧ್ವಜ ರೋಹಣ ಕಾರ್ಯಕ್ರಮ ಮುಖಾಂತರ ಉದ್ಘಾಟನೆ ಆಗಲಿದೆ. ಡಿ.17ರ ಸಂಜೆ 7 ಗಂಟೆಯಿಂದ ಅಯ್ಯಪ್ಪ ಸ್ವಾಮಿ ಪಡಿಪೂಜ ಕಾರ್ಯಕ್ರಮ ನೆರವೇರುತ್ತದೆ. ಡಿಸೆಂಬರ್-25ರ ಭಾನುವಾರ ಮಧ್ಯಾಹ್ನ 12 ಗಂಟೆಯಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹಾ ಅನ್ನದಾನ ಕಾರ್ಯಕ್ರಮ ನೆರವೇರಲಿದೆ. 2023ರ ಜನವರಿ 13 ರಂದು ಶುಕ್ರವಾರ ಸಂಜೆ 5:30ಕ್ಕೆ ಅಯ್ಯಪ್ಪ ಸ್ವಾಮಿಯ ಆಭರಣ ಮೆರವಣಿಗೆ ಚಿತ್ರದುರ್ಗ ನಗರದ ಪ್ರಮುಖ ಬೀದಿಗಳಲ್ಲಿ ನೆರವೇರಿರುತ್ತದೆ. ಜ.14ರಂದು ಶನಿವಾರ ಸಂಜೆ 5:30 ಗಂಟೆಗೆ ಮಕರ ಸಂಕ್ರಮಣದ ಅಂಗವಾಗಿ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ವಿಶೇಷವಾದ ಲಕ್ಷ ದೀಪೋತ್ಸವ ಕಾರ್ಯಕ್ರಮ ನೆರವೇರಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಚಿತ್ರದುರ್ಗದ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶರಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮುರುಗೇಶ್ 9449682119 ಇವರನ್ನು ಸಂಪರ್ಕಿಸಲು ಕೋರಿದ್ದಾರೆ.