i
ವಾಣಿಜ್ಯ ಮಳಿಗೆಗಳು ಪಿಎಲ್ಡಿ ಬ್ಯಾಂಕ್ ಅಭಿವೃದ್ಧಿಗೆ ಸಹಕಾರಿ- ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪಿ.ಎಲ್.ಡಿ ಬ್ಯಾಂಕಿನ ಆವರಣದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವುದರಿಂದ ಬ್ಯಾಂಕಿಗೆ ಹೆಚ್ಚಿನ ವಾರ್ಷಿಕ ಆದಾಯ ನಿರೀಕ್ಷಿಸಬಹುದಾಗಿದ್ದು, ಈ ಆದಾಯದ ಮೂಲಕ ಬ್ಯಾಂಕಿನ ಖರ್ಚುವೆಚ್ಚಗಳನ್ನು ಸರಿದೂಗಿಸಬಹುದಲ್ಲದೆ, ಬ್ಯಾಂಕಿನ ಅಭಿವೃದ್ಧಿಗೆ ಇದು ಸಹಕಾರಿಯಾಗುತ್ತದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದ ಪಿ.ಎಲ್.ಡಿ ಬ್ಯಾಂಕಿನ ಆವರಣದಲ್ಲಿ ನೂತನ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ಕೀರ್ತಿಕುಮಾರಿ ಹನುಮಂತರಾಯ, ಉಪಾಧ್ಯಕ್ಷ ಜಗದೀಶ್, ಬ್ಯಾಂಕಿನ ನಿರ್ದೇಶಕರು ಹಾಗೂ ಹಿರಿಯ ಸಹಕಾರಿಗಳಾದ ಕೆ.ಕೃಷ್ಣಯ್ಯ, ಎಸ್.ಗಿರಿಜಣ್ಣ, ಪಿ.ಎಸ್.ಸಾದತ್ ಉಲ್ಲಾ, ಪಿ.ಎಲ್.ಶಿವಣ್ಣ, ಟಿ.ಮಲ್ಲಿಕಾರ್ಜುನ್, ಡಿ.ದಾಸಪ್ಪ, ಸಿದ್ದಯ್ಯ, ಆರ್.ಶಶಿಧರ್, ಗೋಡೆತಿಪ್ಪೇಸ್ವಾಮಿ, ಡಿ.ಮಂಜುನಾಯಕ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕರು ಹಾಗೂ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಎಸ್.ಜೆ.ಹನುಮಂತರಾಯ ಸೇರಿದಂತೆ ಬ್ಯಾಂಕಿನ ವ್ಯವಸ್ಥಾಪಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.