i
ಬಿಜೆಪಿ ಸಂಸದರು ರಣಹೆಡಿಗಳು ಎಂದ ಸಿದ್ದರಾಮಯ್ಯ…
ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ಮೋದಿಯವರು ಹೆಡ್ ಮಾಸ್ಟರ್, ಅಮಿತ್ ಶಾ ಅಸಿಸ್ಟೆಂಟ್ ಹೆಡ್ ಮಾಸ್ಟರ್. ಬಿಜೆಪಿ ಸಂಸದರು ರಣಹೆಡಿಗಳು. ಇಂತಹ ರಣಹೇಡಿಗಳ ಸರ್ಕಾರ ನಿಮಗೆ ಬೇಕಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ನಾಯಕರ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿ ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನಡುವೆ ಏನೋ ನಡೆಯುತ್ತಿದೆ. ಬೊಮ್ಮಾಯಿ ಅವರು ಆರ್.ಎಸ್.ಎಸ್ ಹೇಳಿದಂತೆ ಕೇಳಬೇಕು. ಆರ್.ಎಸ್.ಎಸ್ ನವರು ಕೂತ್ಕೋ ಎಂದರೆ ಕೂತ್ಕೋಬೇಕು, ನಿಂತ್ಕೋ ಎಂದರೆ ನಿಲ್ಲಬೇಕು ಎಂದು ಟೀಕಿಸಿದ್ದಾರೆ.