i
ಹಿರಿಯೂರು ನಗರಸಭೆ ಅಧ್ಯಕ್ಷೆಯಾಗಿ ಗೀತಾ ಗಂಗಾಧರ್ ಅವಿರೋಧ ಆಯ್ಕೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರ ಸಭೆಯ ನೂತನ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ನಗರಸಭಾ ಸದಸ್ಯೆ ಗೀತಾ ಗಂಗಾಧರ್ ರವರಿಗೆ ಕರ್ನಾಟಕ ರಾಜ್ಯ ಪೌರ ನೌಕರರ ಮತ್ತು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್ . ನಾರಾಯಣಾಚಾರ್ ಅಭಿನಂದನೆ ಸಲ್ಲಿಸಿದ್ದಾರೆ.
ನೂತನ ಚುನಾಯಿತ ಮಂಡಳಿ ಅಧಿಕಾರಕ್ಕೆ ಬಂದಿದ್ದು ನವಂಬರ್-4 2020. ಇದಕ್ಕೆ ನಿಗದಿಪಡಿಸಿದ ಅವಧಿ 30 ತಿಂಗಳು. ಈ ಅವಧಿ ಏಪ್ರಿಲ್ 2023 ಕ್ಕೆ ಮುಕ್ತಾಯವಾಗಲಿದೆ. 2023 ವಿಧಾನಸಭಾ ಚುನಾವಣೆ ನಡೆಯಲಿದೆ.
ಚುನಾವಣಾ ನೀತಿ ಸಂಹಿತೆ ಬಹುಶಃ ಮಾರ್ಚ್ ಮೊದಲನೇ ವಾರ ಅಥವಾ ಎರಡನೇ ವಾರ
ಘೋಷಣೆಯಾಗಬಹುದು. ನೀತಿ ಸಂಹಿತೆ ಜಾರಿಗೆ ಬಂದ ನಂತರ ಯಾವುದೇ ಹೊಸ ಯೋಜನೆಗಳನ್ನು ಮಾಡುವಂತಿಲ್ಲ ಆದ್ದರಿಂದ ನೂತನ ಅಧ್ಯಕ್ಷರು ಇರುವ ಅಲ್ಪ ಅವಧಿಯಲ್ಲಿ ಪಾರದರ್ಶಕತೆ ಮತ್ತು
ಜನ ಸ್ನೇಹಿತ ಆಡಳಿತ ನೀಡಲು ಅವರಲ್ಲಿ ನಾರಾಯಣಾಚಾರ್ ಮನವಿ ಮಾಡಿದ್ದಾರೆ.