i
ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಮಾಯಸಂದ್ರ ಮಂಜುನಾಥ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
2023 ರಂದು ಫೆಬ್ರವರಿ 8 ಮತ್ತು 9 ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರ ಪ್ರಯುಕ್ತ ಹಿರಿಯೂರು ತಾಲೂಕ್ ವಿ.ಎಸ್.ಎಸ್ ಘಟಕವನ್ನು ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಶ್ರೀ ಪ್ರಸಾನ್ನಾನಂದಪುಣ್ಯ ಮಹರ್ಷಿಗಳ ಆದೇಶದ ಮೇರೆಗೆ ಹರ್ತಿಕೋಟೆ ವೀರೇಂದ್ರಸಿಂಹ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಹಿರಿಯೂರು ತಾಲೂಕು ವಿ.ಎಸ್.ಎಸ್ ಸಮಿತಿ ಆಯ್ಕೆ ಮಾಡಲಾಯಿತು.
ಸಮಿತಿಯ ಗೌರವ ಅಧ್ಯಕ್ಷರಾಗಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಿವಪ್ಪನಾಯಕ, ತಾಲೂಕು ಅಧ್ಯಕ್ಷರಾಗಿ ಮಾಯಸಂದ್ರ ಮಂಜುನಾಥ್ ಆಯ್ಕೆ ಆಗಿದ್ದಾರೆ.
ಸಮಿತಿಯ ಸದಸ್ಯರಾಗಿ ಮಸ್ಕಲ್ ಶ್ರೀನಿವಾಸ್, ಬಬ್ಬೂರು ಸಿದ್ದೇಶ್, ಕೊಟ್ಟಿಗೆ ಶಶಿ, ಮಂಜುನಾಥ್ ವದ್ದಿಕೆರೆ ಇವರುಗಳು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜೆ. ಬಿ.ರಾಜಣ್ಣ, ಮಾಳಿಗೆ ಮಂಜಣ್ಣ,ತಿಪ್ಪೆರುದ್ರಣ್ಣ,ದಿವಾಕರ್ ನಾಯಕ,ಲೋಕೇಶ್ ಮೇಟಿಕುರ್ಕೆ, ಮದಕರಿ ರಾಮಾಂಜನೇಯ, ನಾಗರಾಜು, ಮರಡಿ ವಿಶ್ವನಾಥ್, ಶ್ರೀಧರ್, ತಿಪ್ಪೇಸ್ವಾಮಿ, ಯುವ ಮುಖಂಡರಾದ ಅನಿಲ್ ಮಾಳಿಗೆ, ಹೇಮದಳ ದೇವರಾಜ, ಹುಲಿತೋಟ್ಲು ಸುರೇಶ್, ಕೊಟ್ಟಿಗೆ ಪ್ರಜ್ವಲ್,ಕಸವನಹಳ್ಳಿ ಸತೀಶ್, ಹರ್ತಿಕೋಟೆ ಅಜಯ್, ರುದ್ರಮುನಿ, ನಿಂಗರಾಜ್ ಯರಬಳ್ಳಿ ಮುಂತಾದವರು ಭಾಗವಹಿಸಿದ್ದರು.