i
ದುರ್ಗದಿಂದಲೇ ಸ್ಪರ್ಧೆ-ಎಸ್ಕೆಬಿ, ಜೈಲಿನಲ್ಲೇ ಸಂದಾನಕ್ಕೆ ಮುಂದಾಗಿದ್ರಾ ಶರಣರು?
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಅವರು ಮುರುಘಾ ಶರಣರ ವಿರುದ್ಧ ಪಿತೂರಿ ಮಾಡಿದ್ದರು ಎನ್ನುವ ಪ್ರಕರಣಕ್ಕಾಗಿ ಜೈಲು ಸೇರಿದ್ದರು. ಇದೇ ಸಂದರ್ಭದಲ್ಲಿ ಶರಣರು ಎಸ್.ಕೆ.ಬಸವರಾಜನ್ ಜೊತೆ ಮಾತನಾಡಲು ಯತ್ನಿಸಿದ್ದರು ಎನ್ನಲಾಗಿದೆ.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕಾರಾಗೃಹದಲ್ಲಿರುವ ಮುರುಘಾ ಶರಣರು ಜೈಲಿನಲ್ಲೇ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಜೊತೆ ಸಂದಾನಕ್ಕೆ ಮುಂದಾಗಿದರು ಎಂದು ಬಸವರಾಜನ್ ಸ್ಫೋಟ ಮಾಹಿತಿ ನೀಡಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶರಣರು ನನ್ನ ಜೊತೆ ಮಾತನಾಡಲು ಬೇರೊಬ್ಬರಿಗೆ ಹೇಳಿ ಕಳುಹಿಸಿದ್ದರು. ನಾನು ಒಪ್ಪಲಿಲ್ಲ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು, ಅಧಿಕಾರಿಗಳ ಮೇಲೆ ಮುರುಘಾ ಶರಣರು ಒತ್ತಡ ಹಾಕಿದ್ದರು ಆದರೂ ನಾನು ಒಪ್ಪಲಿಲ್ಲ ಎಂದು ಬಸವರಾಜನ್ ಬಹಿರಂಗಪಡಿಸಿದ್ದಾರೆ.
ಸ್ಪರ್ಧೆ ಖಚಿತ-ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದಾಗಿ ಎಸ್.ಕೆ.ಬಸವರಾಜನ್ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದರು. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವುದಿಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ, ಈಗಾಗಲೇ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಿದ್ದೇನೆ, ಮುಂದೆ ನೋಡೋಣ ಎನ್ನುವುದಾಗಿ ಬಸವರಾಜನ್ ತಿಳಿಸಿದರು.