i
ಕಲಾಪ್ರದರ್ಶನಕ್ಕೆ ‘ಚಿತ್ರಸಂತೆ’ಒಳ್ಳೆಯ ವೇದಿಕೆಯಾಗಿದೆ: ಬಸವರಾಜ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಳ್ಳೆಯ ಕಲಾವಿದರಿಗೆ ವೇದಿಗೆ ಕಲ್ಪಿಸುವಲ್ಲಿ ಈ ಚಿತ್ರಸಂತೆ ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ 20 ನೇ
ವರ್ಷದ ‘ಚಿತ್ರಸಂತೆ’ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ್ದರು
ಚಿತ್ರಕಲೆ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ. ಇದು ಮನಸ್ಸಿಗೆ ಸಂತೋಷವನ್ನು ಉಂಟು
ಮಾಡುತ್ತದೆ. ಬೆಲೆ ಬಾಳುವ ವಜ್ರದಂತೆ ಚಿತ್ರಕಲೆ ಅಮೂಲ್ಯವಾದ ಸಂಪತ್ತು. ಜನ ಸಾಮಾನ್ಯರಿಗೆ ಚಿತ್ರಕಲೆ ಬಗ್ಗೆ ಆಸಕ್ತಿ ಮೂಡಿಸುವ
ನಿಟ್ಟಿನಲ್ಲಿ ಚಿತ್ರಸಂತೆ ಒಂದು ಒಳ್ಳೆಯ ಚಿತ್ರಕಲಾ ಪ್ರದರ್ಶನವಾಗಿದೆ.
ದೇಶದ, ರಾಜ್ಯದ ವಿವಿದೆಡೆ ಚಿತ್ರಕಲೆ ಸಂಸ್ಕೃತಿಯನ್ನು ಪಸರಿಸುವ ಕೆಲಸ ಆಗಬೇಕಿದೆ. ಚಿತ್ರಕಲಾ ಪರಿಷತ್ ರಾಷ್ಟ್ರಮಟ್ಟದಲ್ಲಿ ಹೆಸರು
ಮಾಡಿರುವ ಸಂಸ್ಥೆಯಾಗಿದೆ. ಮುಂಬರುವ ವರ್ಷದಿಂದ ಶನಿವಾರ ಮತ್ತು ಭಾನುವಾರ 2 ದಿನಗಳ ಕಾಲ ಚಿತ್ರಸಂತೆ ನಡೆಸಲು
ಉದ್ದೇಶಿಸಲಾಗಿದೆ. ಈ ಬಾರಿ 19 ರಾಜ್ಯಗಳು ಸುಮಾರು 1600 ಕಲಾವಿದರು ಈ ಚಿತ್ರಸಂತೆಯಲ್ಲಿ ಭಾಗವಹಿಸಿರುವುದು ಸಂತಸ
ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಚಿತ್ರಕಲಾ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಪ್ರಸ್ತಾವಿಕ ಭಾಷಣ ಮಾಡಿದರು. ಈ
ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್ನಾರಾಯಣ, ಸಂಸದ ಪಿ.ಸಿ. ಮೋಹನ್, ಶಾಸಕ ರಿಜ್ವಾನ್ ಅರ್ಷದ್,
ಖ್ಯಾತ ಕಲಾವಿದರಾದ ಪ್ರೋ. ಲಕ್ಷ್ಮ ಗೌಡ್ ಹಾಗೂ ಇನ್ನಿತರ ಕಲಾಸಕ್ತರು, ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಚಿತ್ರಸಂತೆ ವೀಕ್ಷಕರು
ಹಾಜರಿದ್ದರು. ಚಿತ್ರಸಂತೆಯಲ್ಲಿ ಕಲಾವಿದರಿಂದ ವಿವಿಧ ಬಗೆಯ ಚಿತ್ರಕಲೆಗಳ ಪ್ರದರ್ಶನ ಹಾಗೂ ಮಾರಟವನ್ನು