i
ಬಿಜೆಪಿ ಇಷ್ಟು ಬಲಿಷ್ಟವಾಗಲು ಕಾಂಗ್ರೆಸ್ ನವರು ಪಕ್ಷ ತೊರೆದು ಹೋಗಿದ್ದು ಕಾರಣ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಒಂದೇ ವೇದಿಕೆಯಲ್ಲಿ ನಾವು ಸಂಗಮವಾಗಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜ್ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಐಕ್ಯತಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಮಾನತೆ ಮತ್ತು ಸಂವಿಧಾನ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಇಂದು ಬಿಜೆಪಿ ಇಷ್ಟು ಬಲಿಷ್ಟವಾಗಲು ಪ್ರಮುಖ ಕಾರಣ ನಮ್ಮವರು ಕಾಂಗ್ರೆಸ್ ಬಿಟ್ಟು ಹೋಗಿ ಬಿಜೆಪಿಗೆ ಸೇರಿದ್ದಾರೆ. ಅವರನ್ನ ಮತ್ತೆ ವಾಪಸ್ ಕರೆತರುವ ಕಾರ್ಯ ಆಗಬೇಕು. ನಾಲ್ಕು ತಿಂಗಳ ಒಳಗೆ ಚುನಾವಣೆ ಬರುತ್ತದೆ. ನಮ್ಮ ವೇದಿಕೆ ಮೂಲಕ ಹತ್ತು ಅಂಶಗಳ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದರೆ ಖಂಡಿತ ಇವೆಲ್ಲವೂ ಜಾರಿ ಮಾಡುತ್ತವೆ ಎಂದು ತಿಳಿಸಿದರು.
SC-ST ಸಮಾಜ ಐತಿಹಾಸಿಕವಾಗಿ ಸಂಗಮವಾಗಿವೆ. ನಾವು ಒಗ್ಗಟ್ಟಾಗಿ ಇದ್ದರೆ ನಮ್ಮ ಶಕ್ತಿ ಕುಂದಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.