i
ಮುದ್ದೆ ಮಾರಮ್ಮ ಜಾತ್ರೆಗೆ ಭೇಟಿ ನೀಡಿದ ಜಿ.ಎಸ್.ಮಂಜುನಾಥ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿಎಸ್ ಮಂಜುನಾಥ್ ರವರು ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮದ ಮುದ್ದೆ ಮಾರಮ್ಮ ಜಾತ್ರೆ ಪ್ರಯುಕ್ತ ಭೇಟಿ ನೀಡಿ ದೇವರ ದರ್ಶನ ಪಡೆದರು.
ನಂತರ ಅವರು ಕೋಡಿಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರ ಮನೆಗಳಿಗೆ ಭೇಟಿ ನೀಡಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ವಿಭಾಗದ ತಾಲೂಕು ಅಧ್ಯಕ್ಷ ಜಿ ಎಲ್ ಮೂರ್ತಿ, ಕೃಷ್ಣಮೂರ್ತಿ ಕೃಷ್ಣಾಪುರ, ದಯಾನಂದ್ ಹರ್ತಿಕೋಟೆ, ನಾಗರಾಜ್ ಮಾಳಗುಂಡನಹಳ್ಳಿ, ಪ್ರಕಾಶ್ ಮಲ್ಲಪ್ಪನಳ್ಳಿ, ಜೀವೇಶ್ ಬೋರನ ಕುಂಟೆ, ರಘುನಾಥ್ ಕೆಆರ್ ಹಳ್ಳಿ, ಶಿವಲಿಂಗಪ್ಪ ವಿಕೆಗುಡ್ಡ, ತಿಪ್ಪೇಸ್ವಾಮಿ ಮಲ್ಲಪ್ಪನಹಳ್ಳಿ ಇನ್ನು ಹಲವು ಕಾಂಗ್ರೆಸ್ ಮುಖಂಡರುಗಳು ಜೊತೆಯಲ್ಲಿದ್ದರು.