i
ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ 3 ಲೋಡ್ ರಾಗಿ ಹುಲ್ಲಿನ ಬಣವೆ ಸಂಪೂರ್ಣ ಭಸ್ಮ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಿಡಿಗೇಡಿಗಳ ಉಪಟಾಳದಿಂದಾಗಿ ಜಾನುವಾರುಗಳಿಗೆ ಶೇಖರಿಸಿಡಲಾಗಿದ್ದ ಮೂರು ಲೋಡ್ ರಾಗಿ ಹುಲ್ಲಿನ ಬಣವೆಗಳು ಸಂಪೂರ್ಣ ಭಸ್ಮವಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಾನಕೊಂಡ ಗ್ರಾಮದಲ್ಲಿ ಬುಧವಾರ ತಡ ರಾತ್ರಿ ಜರುಗಿದೆ.
ಚಿತ್ರದುರ್ಗ ಅಗ್ನಿಶಾಮಾಕ ಸಿಬ್ಬಂದಿಗಳು ತಡ ರಾತ್ರಿಯೇ ಆಗಮಿಸಿ ಬೆಂಕಿ ನಂದಿಸಿದ್ದು ಇತರೇ ರೈತರ ಹುಲ್ಲಿನ ಬಣವೆಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ.
ಜಾನುಕೊಂಡ ಗ್ರಾಮದ ರೈತ ಕೃಷ್ಣಮೂರ್ತಿ ತಂದೆ ಕರಿಸಿದ್ದಪ್ಪ ಇವರ ಮನೆ ಹಿಂಭಾಗದ ಕಣದತ್ತಿರುವ ಹಿತ್ತಲಿನಲ್ಲಿ ಶೇಖರಣೆ ಮಾಡಲಾಗಿದ್ದ ರಾಗಿ ಹುಲ್ಲಿನ ಬಣವೆಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಈಗ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ಜೊತೆಯಲ್ಲಿ 3 ಲೋಡ್ ರಾಗಿ ಹುಲ್ಲಿನ ಬಣವೇ ಸಂಪೂರ್ಣ ಸುಟ್ಟು ಕಾರಕಲಾಗಿದ್ದು ರೈತರಿಗೆ 50 ಸಾವಿರುಗಳಷ್ಟು ನಷ್ಟ ಸಂಭವಿಸಿದೆ. ತಾಲೂಕು ಮತ್ತು ಜಿಲ್ಲಾಡಳಿತ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವುದರ ಜೊತೆಯಲ್ಲಿ ರೈತರಿಗೆ ಆಗಿರುವ ನಷ್ಟ ಭರಿಸುವಂತೆ ಸಂತ್ರಸ್ತ ರೈತರು ಮನವಿ ಮಾಡಿದ್ದಾರೆ.