i
ಕಾಂಗ್ರೆಸ್ ಪಕ್ಷದ ಸುಧಾಕರ್ ಬೆಂಬಲಿಸಲು ಕಾಡುಗೊಲ್ಲರ ತೀರ್ಮಾನ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಮತ್ತು ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಕಾಡು ಗೊಲ್ಲ ಮುಂಖಡರ ಸಭೆ ಕರೆಯಾಲಾಗಿತ್ತು.
ಈ ಸಭೆಗೆ ಮುಖಂಡರುಗಳು ಭಾಗವಹಿಸಿ 2023 ರ ಚುನಾವಣೆಯಲ್ಲಿ ಮಾಜಿ ಸಚಿವ ಡಿ ಸುಧಾಕರ್ ಅವರನ್ನು ಬೆಂಬಲಿಸಿ ಅವರ ಪರವಾಗಿ ಶ್ರಮಿಸಲು ತೀರ್ಮಾನಿಸಲಾಯಿತು.
ಈ ಸಂಧರ್ಬದಲ್ಲಿ ಹಿರಿಯೂರು ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೇಶವ, ಜೆಜಿಹಳ್ಳಿ ಮಾಜಿ ತಾಪಂ ಸದಸ್ಯ S T ಮಂಜುನಾಥ್, ಮಾಜಿ ಗ್ರಾಪಂ ಉಪಾಧ್ಯಕ್ಷ ಪಾತಲಿಂಗಪ್ಪ, ಮುಖಂಡರಾದ ಪಿಎಸ್ ಪ್ರಶಾಂತ್, ನಿಜಿ ದೊಡ್ಡಯ್ಯ, ಕಿಟ್ಟಿ, ಶಿವರುದ್ರಪ್ಪ, ರಾಮು, ಯೋಗಿ, ಕಾಂತ, ರಂಗನಾಥ್ ಮತ್ತಿತರರು ಉಪಸ್ಧಿತರಿದ್ದರು ಎಂದು ಕೇಶವ ಚಂದ್ರವಳ್ಳಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.