i
ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಬೆಸ್ಕಾಂಗೆ ಮುತ್ತಿಗೆ ಹಾಕಿದ ರೈತರು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೇಸಿಗೆ ಕಾಲ ಹೆಚ್ಚಾಗುವ ಸಮಯದಲ್ಲಿ ಸಮರ್ಪಕ ವಿದ್ಯುತ್ ವಿತರಿಸುತ್ತಿಲ್ಲ ರೈತರ ಪಂಪ್ಸೆಟ್ಟುಗಳಿಗೆ ದಿನಕ್ಕೆ ಏಳು ತಾಸು ವಿದ್ಯುತ್ ಕೊಡುವ ಸರ್ಕಾರದ ಆದೇಶವಿದ್ದರೂ ಹಿಂಡಸ ಕಟ್ಟೆ ಸಬ್ ಸ್ಟೇಷನ್ ನಲ್ಲಿ ಕೇವಲ ಆರು ತಾಸ್ ವಿದ್ಯುತ್ ಕೊಡುತ್ತಿದ್ದು ಅದರಲ್ಲಿ 3-4 ಸಾರಿ ಟ್ರಿಪ್ ಆಗಿ ಕಳಪೆ ಮಟ್ಟದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ, ಇದರಿಂದ ರೈತರ ಕೃಷಿ ಪಂಪ್ ಸೆಟ್ ಗಳು ಸುಟ್ಟು ಹೋಗುತ್ತಿದ್ದು ಸಾಕಷ್ಟು ಹಾನಿಯಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದರು.
ರೈತರು ಸಸಿ ನಾಟಿ ಮಾಡುವ ಸಮಯ ಇರುವುದರಿಂದ ಬೆಳಿಗ್ಗೆ ನಾಲ್ಕು ಸಂಜೆ ಮೂರು ತಾಸು ವಿದ್ಯುತ್ ಕೊಡಬೇಕು ಮತ್ತು ಅಕ್ರಮ ಸಕ್ರಮ ಯೋಜನೆಯಲ್ಲಿ ಸುಮಾರು 3000 ರೈತರು ಅರ್ಜಿ ಸಲ್ಲಿಸಿದ್ದು ಇದುವರೆಗೂ ಪರಿವರ್ತಕವನ್ನು ಅಳವಡಿಸಿರುವುದಿಲ್ಲ ಅನೇಕ ಬಾರಿ ಇಲಾಖೆಗೆ ಮನವಿ ಮಾಡಿದರು ಇದುವರೆಗೂ ಕ್ರಮವಹಿಸಿರುವುದಿಲ್ಲ ಆದ್ದರಿಂದ ಕೂಡಲೇ ಪರಿವರ್ತಕ ಅಳವಡಿಸಲು ಮುಂದಾಗಬೇಕು ಇಲ್ಲವಾದರೆ ಇಲಾಖೆ ಮುಂಭಾಗದಲ್ಲಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ರೈತ ಸಂಘದ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ, ಸಿದ್ರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಶಿವಣ್ಣ, ಹೊಸಕೆರೆ ಜಯಣ್ಣ, ವೈ ಶಿವಣ್ಣ, ಜಗದೀಶ್, ರಾಮಣ್ಣ ಸೂರಗೊಂಡನಹಳ್ಳಿ, ಆದಿರಾಳು ತಿಮ್ಮಾರೆಡ್ಡಿ, ಬಂಧಿಹಳ್ಳಿ ರಂಗಸ್ವಾಮಿ, ನಾಗರಾಜಪ್ಪ, ರಂಗೇನಹಳ್ಳಿ ಜಗದೀಶ್, ಹಿಂಡಸಕಟ್ಟೆ ಕೆಂಚಪ್ಪ ರಾಜಪ್ಪ ದೇವೇಂದ್ರಪ್ಪ ಮುಂತಾದವರು ಭಾಗವಹಿಸಿದ್ದರು.