i
ಸಕಾಲದಲ್ಲಿ ಬಜೆಟ್ ಮಂಡನೆ ಮಾಡಲು ನಗರ ಸ್ಥಳೀಯ ಸಂಸ್ಥೆಗಳು ವಿಫಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಿರ್ದಿಷ್ಟ ಸಮಯದೊಳಗೆ ಸ್ಥಳೀಯ ಸಂಸ್ಥೆಗಳು ತನ್ನ ಬಜೆಟ್ ಮಂಡಿಸಬೇಕು ಎನ್ನುವ ನಿಯಮಗಳಿದ್ದರೂ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳು 2023–24 ನೇ ಸಾಲಿನ ಬಡ್ಜೆಟ್ ಮಂಡನೆ ಮಾಡಲು ವಿಫಲವಾಗಿವೆ ಎಂದು ನಿವೃತ್ತ ಪೌರಸೇವಾ ಮತ್ತು ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಎಲ್.ನಾರಾಯಣಾಚಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುನ್ಸಿಪಲ್ ಕಾಯ್ದೆ ಕಲಂ 287ರಂತೆ ಪ್ರತಿವರ್ಷದ ಬಜೆಟನ್ನು ಜನವರಿ 15ನೇ ತಾರೀಖಿನೊಳಗೆ ಅದಕ್ಕಿಂತ ಮುಂಚೆ ಸಾಮಾನ್ಯ ಸಭೆಯಲ್ಲಿ ಮಂಡಿಸಲೇ ಬೇಕಾಗಿರುತ್ತದೆ. ಅದಕ್ಕಿಂತ ಮುಂಚೆ ಲೆಕ್ಕ ಪದ್ಧತಿ ನಿಯಮಗಳು 2006ರಂತೆ
ನವಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಕಡ್ಡಾಯವಾಗಿ ಸಾರ್ವಜನಿಕ ಬಾಗಿತ್ವದ ಸಭೆ ಕರೆಯುವುದು ವಾಡಿಕೆ. ಜಿಲ್ಲೆಯ ಚಿತ್ರದುರ್ಗ ನಗರಸಭೆ
ದಿನಾಂಕ 18 ಜನವರಿ 2023 ರಂದು ಮಂಡಿಸಿದೆ. ಅದೂ ಸಹ ಸಕಾಲದಲ್ಲಿ ಆಗದೆ ಇರುವುದು ಕಾನೂನಿಗೆ ವಿರುದ್ಧವಾಗಿರುತ್ತದೆ.
ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳ ಮೇಲು ಉಸ್ತುವಾರಿ ನೋಡಿಕೊಳ್ಳುವ ಯೋಜನಾ ನಿರ್ದೇಶಕರು ಇದರ ಬಗ್ಗೆ ಗಮನ ಅರಿಸಿ ಸಂಬಂಧಿಸಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.