i
ಎತ್ತಿನಹೊಳೆ ಸಮಗ್ರ ಕುಡಿಯುವ ನೀರು:ಸಚಿವ ಕಾರಜೋಳ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಎತ್ತಿನಹೊಳೆ ಬಯಲುಸೀಮೆ ಕುಡಿಯುವ ನೀರಿನ ಯೋಜನೆಯು ಪ್ರಗತಿಯಲ್ಲಿದ್ದು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಿದ್ದು, ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದರು.
ವಿಧಾನಸಭೆಯಲ್ಲಿ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಟಿ ಅವರ ಚುಕ್ಕೆಗುತಿನ ಪ್ರಶ್ನೆಗೆ ಉತ್ತರಿಸಿದ ಅವರು ಸಚಿವರು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಎತ್ತಿನಹೊಳೆ ಬಯಲುಸೀಮೆ ಕುಡಿಯುವ ನೀರಿನ ಯೋಜನೆಯು ಪ್ರಗತಿಯಲ್ಲಿದ್ದು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದರು.
ಗೌರಿಬಿದನೂರು ಗುರುತ್ವ ಫೀಡರ್ ಕಾಮಗಾರಿ ನಿರ್ಮಾಣ : ಎತ್ತಿನಹೊಳೆ ಮುಖ್ಯ ನಾಲೆಯ ಸರಪಳಿ 258.570 ಕಿಮೀ ನಲ್ಲಿ ಕವಲೊಡೆಯುವ ಗೌರಿಬಿದನೂರು ಗುರುತ್ವ ಫೀಡರ್ ನಿಂದ 1,826 ಟಿ.ಎಂ.ಸಿ ನೀರಿನ ಬಳಕೆಯೊಂದಿಗೆ ಗೌರಿಬಿದನೂರು ತಾಲ್ಲೂಕಿಗೆ ಕುಡಿಯುವ ನೀರು ಮತ್ತು ಗೌರಿಬಿದನೂರು ತಾಲ್ಲೂಕಿನ 86 ಕೆರೆಗಳು, ಮಧುಗಿರಿ ತಾಲ್ಲೂಕಿನ 5 ಕೆರೆಗಳು ಒಟ್ಟು 107 ಕೆರೆಗಳನ್ನು ಅವುಗಳ ಸಾಮಥ್ರ್ಯದ ಪ್ರತಿಶತ ಶೇ.50 ಮೀರದಂತೆ ತುಂಬಿಸಲು ಉದ್ದೇಶಿಸಿದ್ದು, ಪ್ರಸ್ತುತ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ಈ ಪೀಢರ್ನ ಪೈಪ್ ಲೈನ್ ನ ಒಟ್ಟು ಉದ್ದ 81.60 ಕಿಮೀ ಇದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ 27.411 ಕಿಮೀ ಉದ್ದದ ಪೈಪ್ ಲೈನ್ ಹಾದು ಹೋಗುತ್ತಿದ್ದು, ಈ ಪೈಕಿ 25.053 ಕಿಮೀ ಪೈಪ್ ಲೈನ್ ಕಾಮಗಾರಿಯು ಪೂರ್ಣಗೊಂಡಿದ್ದು ಉಳಿಕೆ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಗುರುತ್ವ ಕಾಲುವೆ ವಿಸ್ತರಣಾ ಕಾಮಗಾರಿಗಳ ಪೈಕಿ ಒಟ್ಟು 2.25 ಕಿಮೀ ಉದ್ದವು ದೊಡ್ಡಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುತ್ತಿದ್ದು, ಪ್ರಸ್ತುತ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಸಮತೋಲನಾ ಜಲಾಶಯ ನಿರ್ಮಾಣ ಕಾಮಗಾರಿಯನ್ನು ಈಗಾಗಲೆ ಗುತ್ತಿಗೆಗೆ ವಹಿಸಲಾಗಿದ್ದು ಕಾಮಗಾರಿಯನ್ನು ಪ್ರಾರಂಭಿಸಬೇಕಿರುತ್ತದೆ. ಸಮತೋಲನ ಜಲಾಶಯದ ನಂತರದ ಲಿಫ್ಟ್ ಕಾಂಪೋನೆಂಟ್ ಮತ್ತು ಡಿಸಿ-5 ನಂತರದ 22.30 ಕಿಮೀವರೆಗಿನ ಗ್ರಾವಿಟಿ ಮೇನೆ ನಿರ್ಮಾಣ ಕಾಮಗಾರಿಗೆ ಈಗಾಗಲೇ ಟೆಂಡರ್ ಅನುಮೋದನೆಗೊಂಡಿದ್ದು, ಗುತ್ತಿದಾರರೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಬೇಕಿರುತ್ತದೆ. ಈ ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ವಿಧಾನಸಭೆಯಲ್ಲಿ ತಿಳಿಸಿದರು.